ತ. ರಾ. ಸುಬ್ಬರಾವ್
- 1. ಸಿಡಿಲ ಮೊಗ್ಗು
ಹೊಯ್ಸಳ ಎರೆಯಂಗ ದೇವನು, ಚಾಲುಕ್ಯ ವಿಕ್ರಮಾದಿತ್ಯನ ಸಾಮಂತನಾಗಿದ್ದ ಕಾಲದಲ್ಲಿ ಚಾಲುಕ್ಯ ಉತ್ಸವಕ್ಕೆಂದು ಎರೆಯಂಗನು ದ್ವಾರಸಮುದ್ರದಿಂದ ತಂದೆ ವಿನಯಾದಿತ್ಯ, ಪತ್ನಿ ಏಚಲಾದೇವಿ, ಮಕ್ಕಳಾದ ಬಲ್ಲಾಳ, ಬಿಟ್ಟಿದೇವ(ವಿಷ್ಣು ವರ್ಧನ) ಮತ್ತು ಉದಯಾದಿತ್ಯನೊಂದಿಗೆ ಸಕುಟುಂಬ ಸಮೇತನಾಗಿ ಆಗಮಿಸಿದ್ದಾಗ, ಅಲ್ಲಿ ಚಾಲುಕ್ಯನ ಅಧಿಕಾರಿ ಮಾರಸಿಂಹನು ಅವರ ಆತಿಥ್ಯದ ಜವಾಬ್ದಾರಿ ಹೊತ್ತು, ಉಪಚರಿಸುತ್ತಾನೆ. ಅಲ್ಲಿ ಬಿಟ್ಟಿದೇವ ಮತ್ತು ಮಾರಸಿಂಹನ ಪುತ್ರಿ ಶಾಂತಲೆಯ ಪ್ರೇಮೋದಯ, ಚಾಳುಕ್ಯ ಚಕ್ರವರ್ತಿಯೊಡನೆ ಬಿಟ್ಟಿದೇವನು ಸ್ವಾಭಿಮಾನ ಬಿಡದೆ ಸೆಟೆದು ನಿಂತು ವರ್ತಿಸಿ, ಮುಂದೆ ತಾನೂ ಚಕ್ರವರ್ತಿಯಾಗುವ ಸೂಚನೆಯ ಸಿಡಿಲು, ಮೊಗ್ಗಿನ ರೂಪದಲ್ಲಿ ವ್ಯಕ್ತವಾಗುತ್ತದೆ.
ಶಾಂತಲೆಯ ರೂಪ ಲಾವಣ್ಯಗಳ ವರ್ಣನೆ, ಅವಳು ಹೂ ಕೊಯ್ಯಲು ಬಂದಾಗ ಅವಳ ಮತ್ತು ಹೂವುಗಳ ನಡುವಣ ಸಂಭಾಷಣೆಯ ಸೊಬಗು ಓದಿಯೇ ಸವಿಯಬೇಕು.
- 2. ಹೊಯ್ಸಳೇಶ್ವರ ವಿಷ್ಣುವರ್ಧನ
ಹೊಯ್ಸಳ ಎರೆಯಂಗ ದೇವನ ತರುವಾಯ ಪಟ್ಟಕ್ಕೆ ಬಂದ ಅವನ ಹಿರಿಯ ಮಗ ಬಲ್ಲಾಳನ ಕಾಲದಲ್ಲಿ ಅವನು ಕಾಯಿಲೆಯಿಂದ (ಹುಟ್ಟು ವ್ಯಾಧಿ) ಬಲಳುತ್ತಿರುವ ವೇಳೆಯಲ್ಲಿ ಚಾಲುಕ್ಯ ಸಾಮಂತನಾದ ಜಯಸಿಂಹ ಹೊಯ್ಸಳರ ಮೇಲೆ ದಂಡೆತ್ತಿ ಬರುತ್ತಾನೆ. ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು, ರಕ್ಷಣೆ ನಿರೀಕ್ಷಿಸಿದ್ದ ದಿಕ್ಕಿನಿಂದ ಆಕ್ರಮಣ ಎದುರಿಸಬೇಕಾದಾಗ, ಬಲ್ಲಾಳನು ಚಾಲುಕ್ಯರ ಬೆನ್ನು ಹಿರಿತದ ದ್ರೋಹಕ್ಕೆ ಸಿಡಿದೆದ್ದು, ವ್ಯಾಧಿಯನ್ನು ಲೆಕ್ಕಿಸದೆ ಮಾಡಿದ ಹೋರಾಟ ಯುಗ ಯುಗಗಳಾಚೆಗೂ ಜನ ಮನಗಳಲ್ಲಿ ಉಳಿದಿರುವಂತದ್ದು, ಆ ಯುದ್ದದಲ್ಲಿ ಜಯಸಿಂಹನನ್ನು ಸೋಲಿಸಿ, ಸಾವಿಗಿಂತಲೂ ನೀಚವಾಗಿ ಅವಮಾನಿತನನ್ನಾಗಿ ಮಾಡಿ, ವೀರ ಬಲ್ಲಾಳನೆಂದು ಬಿರುದಾಂಕಿತನಾಗುತ್ತಾನೆ. ನಂತರ ಅವನ ಅಕಾಲಿಕ ಸಾವಿನ ತರುವಾಯ ಬಿಟ್ಟಿದೇವ (ವಿಷ್ಣುವರ್ಧನ) ರಾಜನಾಗಿ ತಲಕಾಡನ್ನು ಚೋಳರ ಆಳ್ವಿಕೆಯಿಂದ ಮುಕ್ತಗೊಳಿಸಿ, ತಲಕಾಡುಗೊಂಡ ಎಂಬ ಬಿರುದು ಪಡೆದು ಕನ್ನಡಿಗರ ಕೀರ್ತಿ ಕಳಶವಾಗಿತ್ತಾನೆ.
ಕೃತಿ ಅತಿಮೋಹಕವಾಗಿದ್ದು, ಹೊಯ್ಸಳರ ಮೇಲಿನ ಕನ್ನಡಿಗರ ಅಭಿಮಾನವನ್ನು ನೂರ್ಮಡಿಗೊಳಿಸುತ್ತದೆ.
- 3. ಕಸ್ತೂರಿ ಕಂಕಣ
ಕಿರು ಪರಿಚಯ -
ದುರ್ಗದ ಪಾಳೆಯಗಾರ ಕಸ್ತೂರಿ ರಂಗಪ್ಪ ನಾಯಕನ ಕಾಲದಲ್ಲಿ ನಡೆದ, ಸೀರ್ಯ ಪಾಳೆಯಗಾರರು ಮಾಡಿದ ಮೋಸಕ್ಕೆ ಪ್ರತಿಫಲವಾಗಿ ನಡೆದ ಯುದ್ದದ ಕಥಾನಕ. ಇಲ್ಲಿ ಆಗಿನ ರಾಜರುಗಳು ಪರ ಸಂಸ್ಥಾನಗಳನ್ನು ಕಬಳಿಸಲು ಮಾಡುತ್ತಿದ್ದ ಮದುವೆಯಂತಹ ಪಿಥೂರಿಗಳು, ಅವುಗಳನ್ನು ಸ್ಪಷ್ಟವಾಗಿ ಕಂಡುಹಿಡಿಯಬಲ್ಲ ಮಂತ್ರಿಗಳ ರಾಜತಾಂತ್ರಿಕತೆ. ಹಿಂದೂ ಸಂಪ್ರದಾಯಗಳು ಮತ್ತು ಸಾಮಾಜಿಕ ಜೀವನ ಶೈಲಿಯ ಮುದ್ದಾದ ವರ್ಣನೆ ಇಲ್ಲಿದೆ. ಕಾದಂಬರಿಯ ಶೀರ್ಷಿಕೆಯ ಸೊಬಗು, ಕಾದಂಬರಿಯನ್ನು ಓದಿದ ಮೇಲೆ ಮನಸ್ಸಿಗೆ ಹತ್ತಿರವಾಗುತ್ತದೆ.
- 4. ಕಂಬನಿಯ ಕುಯಿಲು
ಕಿರು ಪರಿಚಯ - ಕಸ್ತೂರಿ ರಂಗಪ್ಪ ನಾಯಕನ ಕಿರಿಯ ಮಗ ಹಿರೇ ಮದಕರಿ ನಾಯಕ ಪುತ್ರನಿಲ್ಲದೆ ಅಕಾಲಿಕ ಮರಣವನ್ನಪ್ಪಿದ ನಂತರ ಸಿಂಹಾಸನಕ್ಕಾಗಿ ನೆಡೆಯುವ ಗೊಂದಲ ಮತ್ತು ಹೋರಾಟವನ್ನು ಇಲ್ಲಿ ಚಿತ್ರಿಸಲಾಗಿದೆ. ಕಥೆ ಹಲವು ತಿರುವು ಹಾಗು ಆಕಸ್ಮಿಕ ಘಟನೆಗಳೊಂದಿಗೆ ರೋಚಕವಾಗಿದೆ. ರಂಗಪ್ಪ ನಾಯಕನ ಹಿರಿಯ ಮಗ ಸರ್ಜೇನಾಯಕನ ಮಕ್ಕಳಾದ ಲಿಂಗಣ್ಣನಾಯಕ ಹಾಗು ಚಿಕ್ಕಣ್ಣ ನಾಯಕರ ನಡುವಿನ ಭಿನಾಭಿಪ್ರಾಯದಲ್ಲಿ, ಲಿಂಗಣ್ಣನಾಯಕನ ಉದಾತ್ತ ವ್ಯಕ್ತಿತ್ವ ಆದರ್ಶಮಯವಾಗಿದೆ. ರಾಣಿ ಓಬವ್ವ ನಾಗತಿಯ ಸಖಿ ಗಿರಿಜೆಯದು ಕೂಡ ಬಹು ಮುಖ್ಯ ಪಾತ್ರ.
- 5. ರಾಜ್ಯದಾಹ
ಕಿರು ಪರಿಚಯ -
ಚಿಕ್ಕಣ್ಣನಾಯಕ, ದಳವಾಹಿ ಮುದ್ದಣ್ಣನ ಬೆಂಬಲದಿಂದ ಸಿಂಹಾಸನವನ್ನೇರಿ, ಮುದ್ದಣ್ಣನಿಗೆ ಸರ್ವಾಧಿಕಾರಿ ಪದವಿ ನೀಡಿ ಸುಖಲೋಲುಪನಾಗುತ್ತಾನೆ. ಈ ಸಮಯದಲ್ಲಿ ಮುದ್ದಣ್ಣನಲ್ಲಿ ರಾಜ್ಯದಾಹ ಹುಟ್ಟಿಕೊಳ್ಳುತ್ತದೆ. ಇದು ಅತಿಯಾದಾಗ ಚಿಕ್ಕಣ್ಣನಾಯಕನ ವಿರೋಧ, ರಾಜಕೀಯ ಕಲಹಗಳು, ಯುದ್ಧ, ಅಧಿಕಾರದ ಮೋಹಗಳನ್ನು ಬಹು ಸ್ವಾರಸ್ಯಕರವಾಗಿ ಬಿಂಬಿಸಲಾಗಿದೆ.
- 6. ರಕ್ತರಾತ್ರಿ
ಕಿರು ಪರಿಚಯ -
ಚಿಕ್ಕಣ್ಣನಾಯಕನ ತರುವಾಯ ಮುದ್ದಣ್ಣನು ಸಿಂಹಾಸನವನ್ನು ಆಕ್ರಮಿಸಬಯಸಿದಾಗ, ಅವನಿಗೆ ಆಸ್ಪದ ಕೊಡದಂತೆ ಪ್ರಧಾನಿಗಳ ಸಹಾಯದಿಂದ ಲಿಂಗಣ್ಣನಾಯಕ ಪಟ್ಟವನ್ನೇರುತ್ತಾನೆ. ಆಗ ಇಡೀ ರಾಜ್ಯ ಎರಡು ಬಣವಾಗಿ ರೂಪುಗೊಳ್ಳುತ್ತದೆ. ಕಡೆಗೆ ಮುದ್ದಣ್ಣನ ಸರ್ವಾಧಿಕಾರಕ್ಕೆ ಕುತ್ತು ಬಂದಾಗ ಸಿಡಿದೇಳುವ ಮುದ್ದಣ್ಣ ತನ್ನ ವಿರೋದಿಗಳನ್ನೆಲ್ಲ ಮೋಸ ಕಪಟಗಳಿಂದ ಮಟ್ಟ ಹಾಕುವ, ಹಾಗು ಅವನ ಗೆಲುವಿನ ರಕ್ತಮಯ ರಾತ್ರಿಯ ಬಣ್ಣನೆ ರೋಚಕವಾಗಿದೆ.
- 7. ತಿರುಗುಬಾಣ
ಕಿರು ಪರಿಚಯ -
ಮುದ್ದಣ್ಣನ ಪತನಕ್ಕೆ ಗಿರಿಜೆ ಪಣತೊಟ್ಟು, ಪ್ರಧಾನಿ ಪರಶುರಾಮಪ್ಪ ಮತ್ತು ದಳವಾಹಿ ಭರಮಣ್ಣನನ್ನು ಹುರಿದುಂಬಿಸಿ ಮುದ್ದಣ್ಣನ ವಿರುದ್ದ ಹೋರಾಟಕ್ಕೆ ನಾಂದಿ ಹಾಡಿ ತಿರುಗುಬಾಣವಾಗುತ್ತಾಳೆ. ದುರ್ಗವನ್ನು ಮುದ್ದಣ್ಣನ ಘೋರ ರಕ್ತಮಯ ಕಪಿಮುಷ್ಟಿಯಿಂದ ಬಿಡಿಸಲು ಹಳ್ಳಿ ಹಳ್ಳಿಗಳ ರಾಜಭಕ್ತ ಗೌಡರುಗಳು, ವರ್ತಕರು, ಜನಗಳು ಎಲ್ಲರೂ ಪರಶುರಾಮಪ್ಪನಿಗೆ ಸಹಾಯವಾಗುತ್ತಾರೆ. ಗೌಡತಿಯೊಬ್ಬಳ ದಿಟ್ಟತನ, ಗಿರಿಜೆಯು ನಾಗತಿಯ ಪ್ರೇತಾತ್ಮದಂತೆ ತನ್ನ ಸೇಡನ್ನು ತೀರಿಸಿಕೊಳ್ಳುವುದು ಎಲ್ಲವೂ ಸಹ ಕಾದಂಬರಿಯ ಪ್ರತೀ ಅಕ್ಷರದಲ್ಲೂ ರೋಮಾಂಚನವನ್ನುಂಟು ಮಾಡುತ್ತವೆ.
- 8. ಹೊಸ ಹಗಲು
ಕಿರು ಪರಿಚಯ -
ಮುದ್ದಣ್ಣನಿಂದಾಗಿ ದುರ್ಗದ ಪಾಳೆಯಗಾರ ಮೂಲ ಪುರುಷ ಮತ್ತಿ ತಿಮ್ಮಣ್ಣ ನಾಯಕರ ವಂಶ ನಿರ್ವಂಶವಾದ ಬಳಿಕ, ಅಲ್ಲಿಗೆ ಬೇರೆಯವರನ್ನು ತರಲಿಚ್ಚಿಸಿದೆ, ಸಿದ್ದರಿಂದ ಒಲಿದ ಈ ಸಿಂಹಾಸನವನ್ನು ತಿಮ್ಮಣ್ಣ ನಾಯಕನ ರಕ್ತ ಸಂಬಂಧಿಗೇ ನೀಡಬೇಕೆಂದು ಮಂತ್ರಾಲೋಚನೆಯಾಗಿರುತ್ತದೆ. ಆಗ ಸೋದರ ಸಂಬಂಧಿಯಾದ ಹಳ್ಳಿಯಲ್ಲಿ ಕುರಿ ಕಾಯುವವನಾಗಿದ್ದ ಭರಮಣ್ಣ ನಾಯಕನಿಗೆ, ಮುರುಘರಾಜೇಂದ್ರ ಸ್ವಾಮಿಗಳ ಆಶಿರ್ವಾದದಿಂದ ಸಿಂಹಾಸನವೊಲಿಯುತ್ತದೆ.
ಮುಂದೆ ಈತ ಬಿಚ್ಚುಗತ್ತಿ ಭರಮಣ್ಣನೆಂದು ಪ್ರಸಿದ್ದಿಯಾಗುತ್ತಾನೆ. ಈತನ ರಾಜ್ಯಭಾರದ ಮೊದಲಿನ ದಿನಗಳನ್ನು, ಆತ ಎದುರಿಸಬೇಕಾದ ಅವಮಾನ, ಯುದ್ದಗಳು ಮತ್ತವನು ಎಲ್ಲವನ್ನೂ ಜಯಿಸಿದ ಬಗೆಯನ್ನು ಕುತೂಹಲಕರವಾಗಿ ಬಿಂಬಿಸಿದ್ದಾರೆ.
- 9. ವಿಜಯೋತ್ಸವ
ಕಿರು ಪರಿಚಯ - ಭರಮಣ್ಣ ನಾಯಕನ ಕಾಲದಲ್ಲಿ ಲೂಟಿಕೋರ ಮರಾಠ ಸರದಾರ ಆಕ್ರಮಣ ಗಳಾಗುತ್ತಿರುತ್ತವೆ. ಇವರಿಂದಾಗಿ ತನ್ನ ಆಸ್ತಿ ಪಾಸ್ತಿಯನ್ನೆಲ್ಲಾ ಕಳೆದುಕೊಂಡ ಫ್ರೆಂಚ್ ವ್ಯಕ್ತಿಯೊಬ್ಬ ಭರಮಣ್ಣ ನಾಯಕನನ್ನು ಆಶ್ರಯಿಸಿ ಬಂದು ಸೇನೆಯಲ್ಲಿ ಸೇರಿ, ಮರಾಠ ಸರದಾರ ಸಂತೋಜಿ ಘೋರ್ಪಡೆಯ ವಿರುದ್ದ ಸೇಡು ತೀರಿಸಿಕೊಳ್ಳುತ್ತಾನೆ. ಇಲ್ಲಿ ಮೆಹರ್ಬಾನು ಎಂಬ ಸ್ಪುರದ್ರೂಪಿ ಸಂಗೀತಗಾರ್ತಿಯ ಮತ್ತು ಫ್ರೆಂಚ್ ಲಾಲಿಸಾಹೆಬನ ಪ್ರೇಮದ ಕಥಾಹಂದರವೂ ಇದೆ.
- 10. ದುರ್ಗಾಸ್ತಮಾನ
ಕಿರು ಪರಿಚಯ -
ದುರ್ಗದ ಸ್ವಾಭಿಮಾನದ ಪ್ರತೀಕ, ರಣರಂಗ ಗಂಡುಗಲಿ, ಎಪ್ಪತ್ತೇಳು ಪಾಳೆಯಗಾರರ ಮಿಂಡ, ಎಂಬೆಲ್ಲ ಬಿರುದಾಂಕಿತನಾದ, ದುರ್ಗದ ಕೊನೆಯರಸು ಮದಕರಿನಾಯಕನ ಜೀವನ ಕಾದಂಬರಿ. ಇಲ್ಲಿ ಆತನ ಬಾಲ್ಯ, ನಾಯಕನಾದ ಬಗೆ, ಸಾಕುತಾಯಿಯಾದ ನಾಗತಿಯ(ರಾಣಿ) ಮಮತೆ, ಪ್ರಧಾನಿ ಕಳ್ಳಿ ನರಸಪ್ಪನಿಂದ ರಾಜಕೀಯದ ವಿದ್ಯೆ, ದೊರೆಯಾಗಿ ಬಾಳಿದ ದರ್ಪ, ಅಚಾತುರ್ಯಗಳು, ಹೈದರಾಲಿ ಮತ್ತು ಮರಾಠರ ನಡುವಿನ ತಿಕ್ಕಾಟದಲ್ಲಿ ತಾನು ಯಾರನ್ನು ನಂಬಬೇಕೆಂಬ ದ್ವಂದ್ವ, ದುರ್ಗದ ಸ್ವಾಬಿಮಾನಕ್ಕೆ ಧಕ್ಕೆ ಬರದಂತೆ ಸಹಾಯ ಕೇಳಿದ ಇಬ್ಬರಿಗೂ ಒಮ್ಮೊಮ್ಮೆ ನೆರವಾಗಿ ಜಯಿಸಿದ ಯುದ್ದಗಳು, ತೋರಿದ ರಣ ಚಾತುರ್ಯಗಳು, ಅಮೋಘ ಗೆಲುವುಗಳು, ಮರಾಠರಿಗೆ ಸೋತು ಸೆರೆಸಿಕ್ಕುವಲ್ಲಿದ್ದ ಹೈದರಾಲಿಯನ್ನು ಪಾರು ಮಾಡಿದ ರೀತಿ, ನಾಲ್ವರು ಸ್ತ್ರೀಯರನ್ನು ಸೇರಿದ್ದು, ಸೈನಿಕರ ಮೇಲಿನ ಪ್ರೇಮಕ್ಕಾಗಿ ರಾಜಗುರುಗಳಲ್ಲಿ ಅಚಾತುರ್ಯವೆಸಗಿದ್ದು, ಸೈನಿಕರಿಂದ ಹೆಣಗಳ ಮೇಲೆ ಕುಳಿತು ರಕ್ತಸ್ನಾನ ಮಾಡಿಸಿಕೊಂಡಿದ್ದು, ಹೈದರಾಲಿಯ ಕಪಟ ಕ್ರೂರತೆಗೆ ತಕ್ಕ ಶಾಸ್ತಿ ಮಾಡಲು ಅವನ ಪರವಾದ ಯುದ್ದದಲ್ಲೇ ಶತ್ರು ಭಂಡಾರವನ್ನು ದೋಚಿ ಹೈದರಾಲಿಗೆ ಅರಿವಿಲ್ಲದಂತೆ ದುರ್ಗಕ್ಕೆ ಸಾಗಿಸಿದ್ದು, ಒಂದೇ ರಾತ್ರಿಯಲ್ಲಿ ಗೆದ್ದ ನಿಜಗಲ್ಲು ಕೋಟೆ, ಹೈದರಾಲಿಯ ಮೋಸಕ್ಕೆ ಸಿಡಿದೆದ್ದು ಅವನ ವಿರೋದ ನಿಂತದ್ದು, ಮೂರುವರ್ಷ ಯುದ್ದ ಮಾಡಿದರೂ ಹೈದರಾಲಿ ದುರ್ಗದ ಒಂದೇ ಒಂದು ಕಲ್ಲನ್ನು ಸಹ ಅಲುಗಾಡಿಸಲಾಗದಂತೆ ಹೋರಾಡಿದ್ದು, ದುರ್ಗದ ದುರಾದೃಷ್ಟಕ್ಕೆ ಕಳ್ಳಿನರಸಪ್ಪನವರು ಹೈದರಾಲಿಗೆ ಸಿಕ್ಕಿ ಬಿದ್ದಿದ್ದು, ಟಿಪ್ಪುವಿಗೆ ಮಣ್ಣು ಮುಕ್ಕಿಸಿದ್ದು, ಮರಾಠರಿಗೆ ಹೈದರಾಲಿಯು ಹಣದ ಆಸೆ ತೋರಿ ಮದಕರಿಗೆ ಸಹಾಯವಾಗದಂತೆ ತಡೆದದ್ದು, ಹೈದರಾಲಿಯನ್ನು ಕಲ್ಲಿನ ಪಂಜರದೊಳಗೆ ಬಂದಿಸಲು ಕಲ್ಲಿನ ಪಂಜರವನ್ನು ಕಟ್ಟಿಸಿ ಪ್ರತಿಜ್ಞೆ ಮಾಡಿದ್ದು, ಹೈದರಾಲಿ ತನ್ನ ಹುಟ್ಟೂರನ್ನು ಸುಟ್ಟ ಸೇಡಿಗೆ ಪ್ರತಿ ಸೋಮವಾರ ಇರುಳ ಕಾಳಗ ಮಾಡಿ ಹೈದರಾಲಿಯ ನೂರು ಸೈನಿಕರ ತಲೆಯನ್ನು ದುರ್ಗದ ಕಾಳಿಗೆ ಬಲಿ ಕೊಟ್ಟದ್ದು, ಕೊನೆಯ ಯುದ್ದದಲ್ಲಿ ರಣಾಂಗಣದಲ್ಲೇ ಮಡಿದದ್ದು.
ಒಂದು ಕಾದಂಬರಿ ಇದಕ್ಕಿಂತ ಇನ್ನೆಷ್ಟು ರೋಚಕ ಘಟನೆಗಳನ್ನು ಹೊಂದಿರಲು ಸಾದ್ಯ, ಇಲ್ಲಿ ಪ್ರತಿ ಪುಟವು ಮದಕರಿಯಲ್ಲಿ ನಮ್ಮ ಅಭಿಮಾನವನ್ನು ಉಕ್ಕಿಸುವ ಚಿಲುಮೆಗಳಾಗುತ್ತವೆ. ಈ ಚಿಕ್ಕ ಸಂಸ್ಥಾನದ ಅವಸಾನ ಒಂದು ಮಹಾಸಾಮ್ರಾಜ್ಯದ ಅಸ್ತಮಾನವಾದಷ್ಟು ಮನಸನ್ನು ಕಲಕುತ್ತದೆ.
ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುತ್ತದೆ. ಈ ಕೃತಿಯ ಬಿಡುಗಡೆಯ ದಿನದಂದು ಚಿತ್ರದುರ್ಗ ತನ್ನೆಲ್ಲ ಅಭಿಮಾನವನ್ನು ತ. ರಾ. ಸು ರವರಿಗೆ ತೋರಿಸುವಂತೆ, ಎಂದೂ ಕೇಳರಿಯದ ಅಮೋಘ ಜನಸಾಗರದ ನಡುವಲ್ಲಿ ಬಿಡುಗಡೆ ಹೊಂದಿರುತ್ತದೆ.
- 11. ನೃಪತುಂಗ
ರಾಷ್ಟ್ರಕೂಟ ದೊರೆ ನೃಪತುಂಗನ ಜೀವನ ಚರಿತೆ. ಪುತ್ರ ವ್ಯಾಮೋಹವನ್ನು ಮೀರಿಸಿದ ಕರ್ತವ್ಯ ಪ್ರೇಮ ನೃಪತುಂಗನ ಬಾಳಿನ ಉತ್ತುಂಗತೆಯನ್ನು ಬಿಂಬಿಸುತ್ತದೆ. ಚಿಕ್ಕದಾದರೂ ಪರಿ ಪೂರ್ಣತೆಯಿಂದಿರುವ ಕೃತಿ.
- 12. ಜೀತದ ಜೀವ
- 13. ರಕ್ತ ತರ್ಪಣ
- 14. ಚಂದವಳ್ಳಿಯ ತೋಟ
ಕಿರು ಪರಿಚಯ -
- 15. ಶಿಲ್ಪಶ್ರೀ
ಕಿರು ಪರಿಚಯ -
- 16. ನಾಗರಹಾವು
ಕಿರು ಪರಿಚಯ -
- 17. ಹಂಸಗೀತೆ
ಕಿರು ಪರಿಚಯ -
- 18. ಬಂಗಾರಿ
ಶಿವರಾಮ ಕಾರಂತ
- 1. ಚೋಮನ ದುಡಿ
ಚೋಮ ಎಂಬ ಹೊಲೆಯನ ದುರಂತ ಜೀವನದ ಕಥಾನಕವಿದು. ಇಲ್ಲಿ ಮಲೆನಾಡಿನ ಹೊಲೆಯರ ಬದುಕನ್ನು ಬಿಂಬಿಸಲಾಗಿದೆ. ದುಡಿ ಎಂಬುದರ ಅರ್ಥ ತಮಟೆಯಂತಹ ಚಿಕ್ಕ ವಾದ್ಯ.
- 2. ಮರಳಿ ಮಣ್ಣಿಗೆ
- 3. ಬೆಟ್ಟದ ಜೀವ
- 4. ಮೂಕಜ್ಜಿಯ ಕನಸುಗಳು
- 5. ಸರಸಮ್ಮನ ಸಮಾಧಿ
- 6. ಕುಡಿಯರ ಕೂಸು
- 7. ಚಿಗುರಿದ ಕನಸು
- 8. ಗೊಂಡಾರಣ್ಯ
- 9. ಅಪೂರ್ವ ಪಶ್ಚಿಮ
- 10. ಹಳ್ಳಿಯ ಹತ್ತು ಸಮಸ್ತರು
- 11. ಮೈಲುಗಲ್ಲಿನೊಡನೆ ಮಾತುಕಥೆ
ಕಿರು ಪರಿಚಯ -
ಕುವೆಂಪು
- 1. ಕಾನೂರು ಹೆಗ್ಗಡತಿ
- 2. ಮಲೆಗಳಲ್ಲಿ ಮಧುಮಗಳು
- 3. ಮಲೆನಾಡಿನ ಚಿತ್ರಗಳು
ಮಲೆನಾಡಿನ ಮಡಿಲು ಕುಪ್ಪಳ್ಳಿಯಲ್ಲಿ ಕಳೆದ ತನ್ನ ಬಾಲ್ಯದ ದಿನಗಳನ್ನು ಲಿಖಿತ ರೂಪದಲ್ಲಿ ವರ್ಣಿಸಲಾಗಿದೆ.
- 4. ಬಿರುಗಾಳಿ
ಕಿರು ಪರಿಚಯ -
- 5. ರಕ್ತಾಕ್ಷಿ
ಕಿರು ಪರಿಚಯ -
- 6. ಸನ್ಯಾಸಿ ಮತ್ತು ಇತರ ಕಥೆಗಳು
ಕಿರು ಪರಿಚಯ -
- 7. ಹೊನ್ನ ಹೊತ್ತಾರೆ
- 8. ಪಕ್ಷಿಕಾಶಿ
- 9. ನವಿಲು
- 10. ಪ್ರೇಮ ಕಾಶ್ಮೀರ
- 11. ಅಗ್ನಿಹಂಸ
- 12. ಕುಟೀಚಕ
- ಮಂತ್ರಾಕ್ಷತೆ
ಕವನ ಸಂಕಲನ
ಮಾಸ್ತಿ ವೆಂಕಟೇಶ ಐಯ್ಯಂಗಾರ್
- 1. ಕಾಕನ ಕೋಟೆ
ಹೆಗ್ಗಡದೇವನ ಕೋಟೆ ಸುತ್ತಲಿನ ಕಾಡು ಕುರುಬರ ಜನಾಂಗದ ಕಾಕ ಎಂಬುವವನು ಅವನ ಹಾಡಿಯನ್ನು ಅಲ್ಲಿನ ಹೆಗ್ಗಡೆಯ ಭ್ರಷ್ಟ ಆಡಳಿತದಿಂದ ಹೇಗೆ ಪಾರು ಮಾಡುತ್ತಾನೆಂಬುದನ್ನು ನಾಟಕ ರೂಪದಲ್ಲಿ, ಮೋಹಕವಾಗಿ ಚಿತ್ರಿಸಲಾಗಿದೆ. ಮೈಸೂರು ಸಂಸ್ತಾನದ ಅಧೀನಕ್ಕೊಳಪಟ್ಟಿದ್ದ ಈ ಪ್ರದೇಶ ಆಗ ರಣಧೀರ ಕಂಠೀರವ ನರಸರಾಜ ಒಡೆಯರ ಆಳ್ವಿಕೆಯಿದ್ದ ಕಾರಣ ಅವರನ್ನೂ ನಾಟಕದಲ್ಲಿ ಪ್ರಸ್ತಾಪಿಸಲಾಗಿದೆ. ಕಾಡುಕುರುಬರ ಜೀವನ ಶೈಲಿ, ಸಂಸ್ಕೃತಿ ಹಾಗು ಅವರ ಸಂಕಷ್ಟಗಳನ್ನು ಚಿಕ್ಕ ನಾಟಕವಾದರೂ ಚೊಕ್ಕವಾಗಿ ಕಣ್ತುಂಬಿಸುತ್ತದೆ.
- 2. ಚೆನ್ನಬಸವ ನಾಯಕ
ಕೆಳದಿಯ (ನಗರ) ಸಂಸ್ಥಾನದ ಕೊನೆಯ ದೊರೆ ಚೆನ್ನಬಸವನಾಯಕನ ದುರಂತ ಜೀವನದ ಕಥಾನಕ.
- 3. ಚಿಕ್ಕ ವೀರರಾಜೇಂದ್ರ
ಕೊಡಗಿನ ಕೊನೆಯ ದೊರೆ, ತನ್ನ ದುರ್ಗುಣಗಳಿಂದಾಗಿ ತನ್ನವರನ್ನೇ ವಿರೋಧಿಸಿ, ಕೊಡಗಿನ ಕೀರ್ತಿಯನ್ನು ಮಣ್ಣುಗೂಡಿಸಿ, ಹೇಡಿಯಂತೆ ಅವಿತು ಕುಳಿತು ಇಂಗ್ಲೀಷರ ಕೈಗೆ ಸಿಕ್ಕು ಬಿದ್ದು, ಕೊಡಗನ್ನು ಇಂಗ್ಲೀಷರ ಆಡಳಿತಕ್ಕೆ ಒಪ್ಪಿಸಿ, ಸ್ವಧರ್ಮವನ್ನು ತಿರಸ್ಕರಿಸಿ, ಹೆಂಡತಿಯನ್ನು ಕೈಬಿಟ್ಟು, ರಾಜ ಕೈದಿಯಾಗಿ ಇಂಗ್ಲೆಂಡ್ ಸೇರಿದನು. ತನ್ನ ಮಗಳಾದ ಗೌರಮ್ಮಳನ್ನು ತನ್ನ ಲಿಂಗಾಯತ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿ, ವಿಕ್ಟೋರಿಯಾ ಗೌರಮ್ಮ ಎಂದು ಹೆಸರಿಟ್ಟು, ಇಂಗ್ಲೆಂಡ್ ರಾಣಿಗೊಪ್ಪಿಸಿ ಸಾವನಪ್ಪುತ್ತಾನೆ. ಇಷ್ಟೆಲ್ಲಾ ದುರಂತಗಳನ್ನು ಜೀವನ ಕಾದಂಬರಿಯಾಗಿ ಸೃಷ್ಟಿಸಲಾಗಿದೆ.
- 4. ಸಮಗ್ರ ಕಥೆಗಳು - ಸಂಪುಟ 1
- 5. ಸಮಗ್ರ ಕಥೆಗಳು - ಸಂಪುಟ 2
- 6. ಸಮಗ್ರ ಕಥೆಗಳು - ಸಂಪುಟ 3
ಪೂರ್ಣ ಚಂದ್ರ ತೇಜಸ್ವಿ
- 1. ಜುಗಾರಿ ಕ್ರಾಸ್
- 2. ಸಹಜ ಕೃಷಿ
- 3. ಕಾಡಿನ ಕಥೆಗಳು
ಜಾಲಹಳ್ಳಿಯ ಕುರ್ಕ
ಬಾಳೆ ತೋಟದ ಸ್ವಾಮಿ
ಮುನಿಶಾಮಿ ಮತ್ತು ಚಿರತೆ
ಕಿರು ಪರಿಚಯ -
- 4. ಕಾಡು ಮತ್ತು ಕ್ರೌರ್ಯ
- 5. ಅಬಚೂರಿನ ಪೋಸ್ಟಾಫೀಸು
- 6. ಕರ್ವಾಲೋ
- 7. ನಿಘೂಡ ಮನುಷ್ಯರು
- 8. ಹುಲಿಯೂರಿನ ಸರಹದ್ದು
- 9. ಚಿದಂಬರ ರಹಸ್ಯ
- 10. ಪಾಕಶಾಸ್ತ್ರ
ಕಿರು ಪರಿಚಯ -
- 11. ಮಿಲ್ಲೇನಿಯಂ ಸೀರೀಸ್
ಕಿರು ಪರಿಚಯ -
2. ಹುಡುಕಾಟ
ಕಿರು ಪರಿಚಯ -
3. ಮಹಾಯುದ್ದ - ಭಾಗ 1
4. ಮಹಾಯುದ್ದ - ಭಾಗ 2
5. ಮಹಾಯುದ್ದ - ಭಾಗ 3
ಕಿರು ಪರಿಚಯ -
6. ದೇಶ ವಿದೇಶ - ಭಾಗ 1
7. ದೇಶ ವಿದೇಶ - ಭಾಗ 2
ಕಿರು ಪರಿಚಯ -
8. ಚಂದ್ರನ ಚೂರು
ಕಿರು ಪರಿಚಯ -
ಅ. ನ. ಕೃಷ್ಣರಾಯ
- 1. ರಣ ವಿಕ್ರಮ
ಕಿರು ಪರಿಚಯ -
"ರಜಪೂತ ದೊರೆ ಮೇವಾಡದ ರಾಣಾ ಪ್ರತಾಪ್", ಇಂದಿಗೂ ಈ ಹೆಸರು ದೇಶದಲ್ಲಿ ಯುವಕರಲ್ಲಿ ಕಿಚ್ಚು ಹಚ್ಚುತ್ತದೆ. ಮೊಘಲ ದೊರೆ ಅಕ್ಬರನ, ಅಖಂಡ ಉತ್ತರ ಭಾರತಕ್ಕೆ ಚಕ್ರವರ್ತಿಯಾಗಿ ಮೆರೆಯಬೇಕೆಂಬ ಆಸೆಗೆ ತಣ್ಣೀರು ಎರಚಿ, ಅಖಂಡ ಮೊಘಲ್ ಸೈನ್ಯಕ್ಕೆ ಎದೆಯೊಡ್ಡಿ ನಿಂತು ಹೋರಾಡಿದ ಮಹಾನ್ ಚೇತನ. ಹಿಂದೂ ಧರ್ಮವನ್ನು ಮುಸ್ಲಿಂ ದಾಳಿಯಿಂದ ರಕ್ಷಿಸಲು ಯುದ್ಧ ಮಾಡಿ, ಸಕಲವನ್ನೂ ಕಳೆದುಕೊಂಡು, ಆದಿವಾಸಿಯಂತೆ ಕಾಡಿನಲ್ಲಿ ಬದುಕಿ, ಮತ್ತೆ ಸೈನ್ಯ ಕಟ್ಟಿ ಮೇವಾಡಿಗೆ ಅಧಿಪತಿಯಾದ ರಾಣಾನ ಜೀವನಗಾಥೆ.
- 2. ಯಲಹಂಕ ಭೂಪಾಲ
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಚರಿತೆ. ಮಧುರೈನಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಬಂದ ಒಬ್ಬ ಗೌಡ ಮತ್ತವನ ತಮ್ಮಂದಿರು ಯಲಹಂಕದ ಸುತ್ತಮುತ್ತ ಜನ ಪ್ರೀತಿಯನ್ನು ಗಳಿಸಿ, ಸಂಸ್ಥಾನವನ್ನು ಸ್ಥಾಪಿಸಿ, ತದನಂತರ ವಿಜಯನಗರಕ್ಕೆ ಅಧೀನರಾಗಿ ಮಾಗಡಿಯಲ್ಲಿ ರಾಜ್ಯಭಾರ ಆರಂಭಿಸಿದರು. ಆ ಗೌಡನ ಮಗನಾದ ಕೆಂಪೇಗೌಡರು ಅಪ್ರತಿಮ ದೇಶಭಕ್ತಿಯನ್ನು ವಿಜಯನಗರದ ಮೇಲೆ ಇರಿಸಿಕೊಂಡಿದ್ದರು, ಮತ್ತು ಅವರು ಬೆಂಗಳೂರಿನ ಕೋಟೆಯನ್ನು ಕಟ್ಟಲು ಸ್ಪೂರ್ತಿ, ಪಟ್ಟ ಶ್ರಮ, ಅವರ ಕುಟುಂಬದ ಮಹಾನ್ ತ್ಯಾಗ, ನಂತರ ವಿಜಯನಗರದಲ್ಲಿ ಅವರ ಗೃಹಭಂಧನ, ಮತ್ತೆ ಬೆಂಗಳೂರಿನ ಕೋಟೆಯಲ್ಲಿ ಕೊನೆಯುಸಿರೆಳೆಯುವ ಕಥೆ ಅದ್ಬುತವಾಗಿದೆ.
- 3. ಪಶ್ಚಾತಾಪ
ಕಿರು ಪರಿಚಯ -
- 4. ಈಚಲು ಮರದವ್ವ
- 5. ಸಂಗ್ರಾಮಧುರೀಣ
ಕಿರು ಪರಿಚಯ -
ಕೆ. ವಿ. ಅಯ್ಯರ್
- 1. ಶಾಂತಲಾ
ಹೊಯ್ಸಳ ವಿಷ್ಣುವರ್ಧನ ಮತ್ತು ನಾಟ್ಯರಾಣಿ ಶಾಂತಲೆಯ ಪ್ರೇಮಮಯ ಜೀವನದ ಮಾನಸ ಕಾದಂಬರಿ. ಹೊಯ್ಸಳ ಯುಗದ ಕನ್ನಡಿಗರ ಸುವರ್ಣ ಬಾಳ್ವೆಯನ್ನು, ಸಂಮೊಹನವಾಗಿ ಕಟ್ಟಿ ಕೊಡಲಾಗಿದೆ. ಕಾದಂಬರಿಯನ್ನು ಓದಿದ ತರುವಾಯ ಶಾಂತಲೆ ಕನ್ನಡಿಗರ ಆದರ್ಶಮಯ ಮಹಿಳೆಯಾಗಿ ಮನಸಿನಲ್ಲಿ ನಿಲ್ಲುತ್ತಾಳೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್
- 1. ನಮ್ಮ ಊರಿನ ರಸಿಕರು
- 2. ಶಿವರಾತ್ರಿ
ಕಿರು ಪರಿಚಯ -
- 3. ಗರುಡಗಂಬದ ದಾಸಯ್ಯ
ಕಿರು ಪರಿಚಯ -
ಚಂದ್ರಶೇಖರ ಕಂಬಾರ
- 1. ಶಿಖರಸೂರ್ಯ
- 2. ಕರಿಮಾಯಿ
- 3. ಕನ್ನಡ ಜನಪದ ಕಥೆಗಳು
ಮ. ನ. ಮೂರ್ತಿ
- 1. ಚಿಕ್ಕದೇವರಾಯ
- 2. ಹೈದರಾಲಿ
ಬೀಚಿ
- 1. ಅಮ್ಮಾವ್ರ ಕಾಲ್ಗುಣ
- 2. ಬೆಳ್ಳಿ ತಿಮ್ಮ ನೂರೆಂಟು ಹೇಳಿದ
- 3. ಸಕ್ಕರೆ ಮೂಟೆ
- 4. ಚಿನ್ನದ ಕಸ
- 5. ಟೆಂಟ್ ಸಿನೆಮಾ
- 6. ಬ್ರಹ್ಮಚಾರಿಯ ಮಗ
- 7. ತಿಮ್ಮನ ತಲೆ
- 8. ಆರಿದ ಚಹಾ
- 9. ಹೆಣ್ಣು ಕಾಣದ ಗಂಡು
- 10. ಮಾತ್ರೆಗಳು
- 11. ಆರು ಏಳು ಸ್ತ್ರೀ ಸೌಖ್ಯ
- 12. ಸಂಪನ್ನರಿದ್ದಾರೆ ಎಚ್ಚರಿಕೆ
ದೇವುಡು
- 1. ಮಹಾಕ್ಷತ್ರಿಯ
ಅಮೀಶ್
- 1. ಮೆಲೂಹದ ಮೃತ್ಯುಂಜಯ
ಕಿರು ಪರಿಚಯ -
- 2. ನಾಗಾ ರಹಸ್ಯ
ಕಿರು ಪರಿಚಯ -
- 3. ವಾಯುಪುತ್ರರ ಶಪಥ
ಕಿರು ಪರಿಚಯ -
ಕೆ. ಎನ್. ಗಣೇಶಯ್ಯ
- 1. ಕರಿಸಿರಿಯಾನ
- 2. ಏಳು ರೊಟ್ಟಿಗಳು
ಸಮೇತನಹಳ್ಳಿ ರಾಮರಾಯ
- 1. ಯದುವೊಡೆಯ
ಮೈಸೂರು ಒಡೆಯರ್ ವಂಶದ ಮೂಲಪುರುಷರಾದ, ಯಾದವ ಕುಲದ ಸೋದರರಿಬ್ಬರ ಕಥಾನಕ. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು, ಉತ್ತರದಿಂದ ದಕ್ಷಿಣ ಭಾರತಕ್ಕೆ ಬರುವ ರಾಜಕುಮಾರ ಸೋದರರು, ಮಹಿಷ ನಾಡನ್ನು ಆಳುತ್ತಿದಾ ಅರಸನ ವೈರಿಗಳನ್ನು ಸಂಹರಿಸಿ, ಅರಸನ ಮಗಳನ್ನು ರಾಜ್ಯವನ್ನು ಸ್ವೀಕರಿಸಿ ಮೈಸೂರನ್ನು ಆಳಿದ ಕಥೆ.
ಸತ್ಯಕಾಮ
- 1. ವಿಚಿತ್ರ ವೀರ್ಯ
ಕಿರು ಪರಿಚಯ -
ಸುರೇಶ್ ಸೋಮ್ ಪುರ
- 2. ಅಘೋರಿಗಳ ನಡುವಲ್ಲಿ
ಅನುವಾದ -
ಕಿರು ಪರಿಚಯ -
ಜಿಮ್ ಕಾರ್ಬೆಟ್
- 1. ಶಿಕಾರಿ ಕಥೆಗಳು
ಅನುವಾದ - ಟಿ. ಎಸ್. ವಿವೇಕಾನಂದ
ಕಿರು ಪರಿಚಯ -
xxxxx
- 1. ಸೀತಾ ಕಲ್ಯಾಣ
ಕಿರು ಪರಿಚಯ -
ಕೋಟೆ ಸೀತಾರಾಮ ಶಾಸ್ತ್ರಿ
- 1. ಧರ್ಮ ದರ್ಶನ
ಕಿರು ಪರಿಚಯ -
ಟಿಪ್ಪು ಸುಲ್ತಾನನ ಕಾಲದಲ್ಲಿ, ಶೃಂಗೇರಿಯ ಮೇಲೆ ನಡೆದ ಮರಾಠರ ಮತ್ತು ಆಂಗ್ಲರ ದಾಳಿಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಶ್ರೀರಂಗಪಟ್ಟಣವನ್ನು ಸೇರುವ ಬ್ರಾಹ್ಮಣನೊಬ್ಬ, ಅಲ್ಲಿನ ಮೌಲ್ವಿಯೊಬ್ಬರ ದಯೆ ಮತ್ತು ಆತಿಥ್ಯಕ್ಕೆ ಮಾರು ಹೋಗಿ, ಜಾತಿ ಭೇಧಗಳನ್ನು ದಿಕ್ಕರಿಸಿ ಮಾನವ ಧರ್ಮವೊಂದನ್ನೇ ಅನುಸರಿಸಿ, ತನ್ನ ಪ್ರೇಯಸಿಯನ್ನು ವರಿಸಲು ಮುಸ್ಲಿಂ ಧರ್ಮ ಅಡ್ಡಿಯಾದಾಗ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕಥಾನಕ. ಇದು ಟಿಪ್ಪು ಸುಲ್ತಾನನ ಬಗ್ಗೆ ಇರುವ ಹಲವು ಭಿನ್ನಾಭಿಪ್ರಾಯಗಳಲ್ಲಿ, ಆತನು ಶೃಂಗೇರಿ ಮಠಕ್ಕೆ ಶ್ರದ್ದೆಯಿಂದ ನೆಡೆದನಾದ್ದರಿಂದ ಅವನನ್ನು ಸರ್ವ ಧರ್ಮ ಸಮ್ನನ್ವಯನೆನ್ದು ಬಿಂಬಿಸಲಾಗಿದೆ.
ತ್ರಿವೇಣಿ
- 1. ಬೆಳ್ಳಿ ಮೋಡ
ಕಿರು ಪರಿಚಯ -
ಚಿಕ್ಕಮಗಳೂರಿನ ಬೆಳ್ಳಿಮೋಡ ವೆಂಬ ಕಾಫಿ ತೋಟದ ಮಾಲೀಕರ ಮಗಳಾದ ಇಂದಿರಾ, ಮತ್ತವಳ ಜೀವನದ ಕಥೆ ಇದು. ತನ್ನ ವಿದೇಶದ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೆಲಬರುವ ಮೋಹನ ಎಂಬ ಕೃತಘ್ನ ಯುವಕನಿಂದ ಪ್ರೇಮ ಭಘ್ನಳಾಗಿ, ತನ್ನ ತಮ್ಮನಿಗಾಗಿ ತವರಲ್ಲೇ ಅವಿವಿವಾಹಿತಳಾಗಿ ನಿಲ್ಲುವ ಮನೋಹರ ಕಥಾನಕ.
- 2. ಹೂವು ಮುಳ್ಳು
ಕಿರು ಪರಿಚಯ -
ಡಾ।। ಕೋವೂರ್
- ೧. ದೇವರು, ದೆವ್ವ ಮತ್ತು ವಿಜ್ಞಾನ
ಕಿರು ಪರಿಚಯ -
xxxx
- 1. ನಾಗ ಬಂಧ
ಕಿರು ಪರಿಚಯ -
ಸಿದ್ದಯ್ಯ ಪುರಾಣಿಕ
- 1. ತ್ರಿಭುವನ ಮಲ್ಲ
ಕಿರು ಪರಿಚಯ -
ಸಿದ್ದಲಿಂಗಯ್ಯ
- 1. ಅವತಾರಗಳು
ಕಿರು ಪರಿಚಯ -
xxxx
- 1. ಶಿವಪ್ರಭುವಿನ ಪುಣ್ಯ
ಅನುವಾದ - ಗಳಗನಾಥ
ಕಿರು ಪರಿಚಯ -
ಮಹಾಮಂತ್ರಿ
ವೀರಗಂಗ ವಿಷ್ಣುವರ್ಧನ
ಮಹಾಯೋಗಿ
ಜಿ. ಪಿ. ರಾಜರತ್ನಂ
- 1. ರತ್ನನ ಪದಗಳು
ರಾಜಯೋಗಿ
ಅಗಸ್ತ್ಯ
ಕೊಡಗಿನ ಸುಮಗಳು
ಕಲ್ಲು ಹಾಸಿಗೆ
ರವಿ ಬೆಳಗೆರೆ
- 1. ರಾಜ್ ಲೀಲಾ ವಿನೋದ
ಕಿರು ಪರಿಚಯ -
No comments:
Post a Comment