ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ
ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html
ದಿನ-1: ಕನ್ಯಾಕುಮಾರಿಯಿಂದ ಮದುರೈ
14 ಜನವರಿ 2017
ಶನಿವಾರ
ನನಗೆ ಎಚ್ಚರವಾದಾಗ ಹೊದಿಕೆಯಿಲ್ಲದೆ ಮಲಗಿದ್ದ ನನ್ನ ಕಿವಿಗಳಿಗೆ ಬಸ್ಸಿನ ಕಿಟಕಿಯ ಸಂದಿಯಿಂದ ತಣ್ಣನೆ ಗಾಳಿ ಹೊಡೆಯುತಿತ್ತು. ಬಿಸಿಲುಗಾಲವಾದ್ದರಿಂದ ಅದು ಬೆಳಗಿನ ಜಾವದ ತಂಪು ಗಾಳಿಯಷ್ಟೇ, ಹಾಗಾಗಿಯೇ ದಣಿದಿದ್ದ ನನಗೆ ರಾತ್ರಿ ಚೆನ್ನಾಗಿ ನಿದ್ರೆ ಹತ್ತಿ, ಈಗ ದೇಹ ಮತ್ತು ಮನಸ್ಸು ಮುದಗೊಂಡಿದ್ದವು.
ನನ್ನ ಪಕ್ಕದ ಕ್ಯಾಬಿನ್ನುಗಳಲ್ಲಿ ಮಲಗಿದ್ದ ಶಿವು ಮತ್ತು ಶರತ್ ದಂಪತಿಗಳು ಇನ್ನೂ ಎದ್ದಿರಲಿಲ್ಲ. ಅವರನ್ನು ನಾನಾಗಿ ಏಳಿಸುವುದು ಬೇಡವೆಂದುಕೊಂಡು, ಕಿಟಕಿಯಿಂದ ಹೊರಗೆ ಒಂದೊಂದಾಗೇ ಹಿಂದಕ್ಕೆ ಸರಿಯುತ್ತಿದ್ದ ಊರುಗಳನ್ನು ನೋಡುತ್ತಾ ಕುಳಿತುಕೊಂಡೆ.
ಮೊಬೈಲ್ ತೆಗೆದು data ಆನ್ ಮಾಡಿದೆ.
Data ಆನ್ ಮಾಡುವ ಮೊದಲು, ನಾನೀಗ roaming ನಲ್ಲಿರುವೆ ಎಂದು ನೆನಪಾಯ್ತು. ಛೇ, ಈ trip ಗಾಗಿಯಾದರೂ ಒಂದು JIO ಸಿಮ್ ತೆಗೆದುಕೊಳ್ಳಲಿಲ್ಲವಲ್ಲ ಎಂದು ಬೇಸರವಾಯ್ತು. ಇನ್ನು ಇಪ್ಪತ್ತ್ಮೂರು ದಿನ roaming ನಲ್ಲಿ data ಬಳಸಿದರೆ Airtel ನವರು ಮುಂದಿನ ತಿಂಗಳ ಬಿಲ್ಲಿನಲ್ಲಿ ನನ್ನ ಜೇಬಿಗೆ ಒಂದಲ್ಲ, ಹತ್ತು ಬ್ಲೇಡ್ ಒಟ್ಟಿಗೆ ಹಾಕುತ್ತಾರೆಂದು ಖಾತ್ರಿಯಾಯ್ತು. ಈ mobile ಚಟ ಹತ್ತಿಸಿಕೊಂಡ ಮೇಲೆ ಬೇರೆ ವಿಧಿಯಿಲ್ಲ ಬಳಸಲೇಬೇಕಲ್ಲ, ಆಗಿದ್ದಾಗಲಿ ನೋಡೋಣ ಎಂದುಕೊಂಡೆ.
Google map ನಲ್ಲಿ ಕನ್ಯಾಕುಮಾರಿಯಿನ್ನೂ 30km ಇದೆ ಎಂದು ತೋರಿಸಿತು. ನನ್ನ ಸ್ನೇಹಿತರ Happy Journey ಮೆಸೇಜುಗಳು ಬಹಳಷ್ಟು ಬಂದಿದ್ದವು, ಎಲ್ಲರಿಗೂ ಥ್ಯಾಂಕ್ಸ್ ಹೇಳಿದೆ.
ಇಂದು ಮಕರ ಸಂಕ್ರಾಂತಿ, Happy Sankranti ಶುಭಾಶಯಗಳೂ ಬರಲಾರಂಭಿಸಿದವು, ನಾನೂ ಎಲ್ಲರಿಗೂ ಪ್ರತಿಶುಭಾಶಯ ತಿಳಿಸುತ್ತಾ ಕುಳಿತೆ.
ತುಸು ಹೊತ್ತಿನ ಬಳಿಕ ಉಳಿದವರೆಲ್ಲರೂ ಎದ್ದರು, ಎಲ್ಲರ ಮುಖದಲ್ಲೂ ಒಂದು ಕುತೂಹಲಭರಿತ ಉತ್ಸಾಹ ಕಾಣುತ್ತಿತ್ತು.
ಸುಮಾರು 8ರ ಹೊತ್ತಿಗೆ ಕನ್ಯಾಕುಮಾರಿಯಲ್ಲಿ, ನಮ್ಮೆಲ್ಲ ಲಗೇಜು ರಾಶಿಯೊಂದಿಗೆ ಬಸ್ಸು ಇಳಿದೆವು. ನಮಗೀಗ ಸ್ನಾನ ಮುಗಿಸಿ, ಬೈಕುಗಳು ಸಿಗುವವರೆಗೆ ಲಗೇಜು ಇಟ್ಟಿರಲು ಅರ್ಧ ದಿನದ ಮಟ್ಟಿಗೆ ಹೋಟೆಲ್ ರೂಮು ಬೇಕಾಗಿತ್ತು. ನಾವು ಬಸ್ಸು ಇಳಿದಲ್ಲಿಯೇ ಎಲ್ಲರನ್ನೂ ನಿಲ್ಲಿಸಿ, ನಾನೂ ಶರತ್ ಹೋಟೆಲ್ ಹುಡುಕಿಕೊಂಡು ಹೊರಟೆವು, ತುಸು ದೂರದಲ್ಲಿಯೇ ಸಿಕ್ಕಿದ ಹೋಟೆಲೊಂದಕ್ಕೆ ಹೋಗಿ ಅರ್ಧ ದಿನದ ಮಟ್ಟಿಗೆ Dormitory ರೂಮೊಂದನ್ನು ಬುಕ್ ಮಾಡಿ, ವಾಪಸ್ಸು ಹೋಗಿ ಅವರೆಲ್ಲರನ್ನೂ ಕರೆದುಕೊಂಡು ರೂಮು ಸೇರಿದೆವು. ನನ್ನ ನಾಲ್ಕೈದು ಬ್ಯಾಗುಗಳೊಡನೆ ಲಿಫ್ಟ್ ಇಲ್ಲದ ಆ ಹೋಟೆಲಿನ ನಾಲ್ಕನೇ ಮಹಡಿ ತಲುಪುವಷ್ಟರಲ್ಲಿ ಬೆವೆರಲ್ಲೇ ಸ್ನಾನವಾದಂತಾಯ್ತು. ನಾವು urgent ಅಲ್ಲಿ ಬರೀ ಅರ್ಧ ದಿನಕ್ಕಷ್ಟೇ ಅಲ್ಲವೇ ಎಂದುಕೊಂಡು, ರೂಮ್ ನೋಡದೇ ಬುಕ್ ಮಾಡಿಕೊಂಡು ರೂಮೊಳಗೆ ಬಂದಿದ್ದೆವು. ನಮ್ಮ ತಪ್ಪಿನ ಶಿಕ್ಷೆ ಎಷ್ಟು ಕ್ರೂರವಾಗಿತ್ತೆಂದರೆ, ನಾವು bathroomಗೆ ಕಾಲಿಡಲೂ ಭಯಪಡುವಂತಿತ್ತು.
ಮೊದಲ ದಿನದ ಮೊದಲ ಹೆಜ್ಜೆಯೇ ಹೀಗಾಗಬೇಕೇ... :(
ಇನ್ನೇನೂ ಮಾಡುವಂತಿಲ್ಲ, ಹೇಗೋ ತಯಾರಾದರಾಯ್ತು ಎಂದುಕೊಂಡೆವು.
ನಾವೀಗ ಆ Transportation ಅವರಿಂದ ಬೈಕುಗಳನ್ನು ಪಡೆದುಕೊಂಡು ಬರಬೇಕಿತ್ತು, ಹಾಗಾಗಿ ನಾನು ಶರತ್ ಮತ್ತು ಶಿವು, ಅವರು ಬರ ಹೇಳಿದ ಜಾಗಕ್ಕೆ ಆಟೋ ಹತ್ತಿ ಹೊರಟೆವು. ಆ ವ್ಯಕ್ತಿಯ ಅರ್ಥವಾಗದ ತಮಿಳಿನಿಂದಾಗಿ, ನಾವು ಆ ಸ್ವಲ್ಪವೇ ಇರುವ ಕನ್ಯಾಕುಮಾರಿ ಊರನ್ನು ಮೂರು ಸುತ್ತು ಹೊಡೆದೆವು. ಕೊನೆಗೆ ಆತನೇ ಬಂದು ನಾವಿದ್ದ ಒಂದು ಜಾಗದಿಂದ ಕರೆದುಕೊಂಡು ಹೋದ, ಅದೂ ಎಲ್ಲಿಗೆ, ನಮ್ಮ ಹೋಟೆಲಿನ ಪಕ್ಕದ ರೋಡಿಗೆ. ಛೇ, ಮತ್ತೆ ಎಡವಟ್ಟಾಯಿತಲ್ಲ ಅಂದುಕೊಂಡೆವು.
ಆದರೆ ಅಲ್ಲಿಗೆ ಹೋದರೆ, ಇನ್ನೊಂದು ರಾಮಾಯಣ ಶುರುವಾಗಿತ್ತು. ಆ Transportation ನವನು, ನಮ್ಮ ಬೈಕುಗಳನ್ನು ಕನ್ಯಾಕುಮಾರಿಗೆ ಹತ್ತಿರದ ಒಂದು ಊರಿಗೆ truck ನಲ್ಲಿ ಕಳಿಸಿ, ಅಲ್ಲಿಂದ ಮುಂದಕ್ಕೆ ಒಂದು ಚಿಕ್ಕ goods autoಗೆ ಮೂರು ಬೈಕುಗಳನ್ನು ಮೂಟೆಯಂತೆ ತುಂಬಿ, ಕಳಿಸಿದ್ದಾನೆ. ಅದೂ ಎರಡು ದಿನ ಮುಂಚೆಯೇ.
ನಾವು ಹೋದಕೂಡಲೇ ಆ ಆಟೋ ಡ್ರೈವರ್ ಅಳುತ್ತಾ ಡ್ರಾಮಾ ಮಾಡತೊಡಗಿದ.
"ಸಾರ್, ನಾನು ಎರಡು ದಿನದಿಂದ ಇಲ್ಲಿ ಕಾಯುತ್ತಿದ್ದೇನೆ. ನೀವು ಇವತ್ತು ಬಂದಿದ್ದೀರ"
"ನನಗೆ ಇಲ್ಲಿ ಎರಡು ದಿನದಿಂದ ಊಟ ಇಲ್ಲ, ನಿದ್ದೆ ಇಲ್ಲ"
"ಇವತ್ತು ಪೊಂಗಲ್ ಹಬ್ಬಕ್ಕೆ ಮನೆಗೆ ಹೋಗಬೇಕಿತ್ತು, ಅದೂ ಇಲ್ಲ"
"ಇಲ್ಲಿ ಎರಡು ದಿನದಿಂದ ಪಾರ್ಕಿಂಗ್ ಗೆ, Patrol ಪೊಲೀಸರಿಗೆ ದುಡ್ಡು ಕೊಟ್ಟುಕೊಂಡು ಕಾಯುತ್ತಿದ್ದೇನೆ"
"ನೀವೀಗ ನಾಲ್ಕು ಸಾವಿರ ಕೊಟ್ಟರೇನೇ, ಬೈಕುಗಳನ್ನು ಕೆಳಗಿಳಿಸುತ್ತೇನೆ, ಇಲ್ಲಾ ಆಟೋನ ವಾಪಸ್ಸು ಹೊಡೆದುಕೊಂಡು ಹೋಗುತ್ತೇನೆ"
ಅಂತ, ಒಂದೇ ಸಮನೇ ಗೋಗೊರೆದುಕೊಂಡು ಸುತ್ತ ಮುತ್ತ ಜನರನ್ನು ಸೇರಿಸಿದ.
ನಮಗೆ, ಅವನು ಬೈಕುಗಳನ್ನು ಆಟೋಗೆ ತುಂಬಿದ್ದ ರೀತಿಯನ್ನು ನೋಡಿಯೇ ಸಿಟ್ಟಿನ ಜೊತೆಗೆ, ಬೇಸರವಾಗಿ ಹೋಗಿತ್ತು. ಇನ್ನು ನಮಗೊಬ್ಬರಿಗೂ ಅರ್ಥವಾಗದ ತಮಿಳಿನಲ್ಲಿ ಇಷ್ಟೆಲ್ಲವನ್ನೂ ನಮಗೆ ತಿಳಿಸುವಷ್ಟರಲ್ಲಿ ಕನಿಷ್ಠ ಅರ್ಧ ಘಂಟೆಯಾದರೂ ನಮ್ಮೊಡನೆ ಅವನು ಗೋಗೋರೆದಿದ್ದ.
ಅಷ್ಟರಲ್ಲಿ ನಮ್ಮ ಸುತ್ತ ಸುಮಾರು ಹತ್ತರಿಂದ ಹದಿನೈದು ಜನ ನಿಂತಿದ್ದರು. ನಮಗೋ ಚೂರೂ ತಮಿಳು ತಿಳಿಯುತ್ತಿರಲಿಲ್ಲ. ನಾವು ಕನ್ನಡದಲ್ಲಿ, ಹಿಂದಿಯಲ್ಲಿ ಅದು ಇದು ಹೇಳುತ್ತಿದ್ದೆವು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ, ಹರುಕು-ಮುರುಕು ಹಿಂದಿಯಲ್ಲಿ ಉತ್ತರಿಸತೊಡಗಿದ. ನಮಗಾಗ Translator ಒಬ್ಬ ಸಿಕ್ಕ ಖುಷಿಯಾಯಿತು. ಆದರೆ ಯಾರೂ ನಮ್ಮ ಪರವಾಗಿ ಮಾತಾಡುವುದಿರಲಿ, ನಮ್ಮ ಮಾತನ್ನೇ ಯಾರೂ ಕೇಳುತ್ತಿರಲಿಲ್ಲ.
ಕೊನೆಗೆ ನಾವೂ ಜೋರುಮಾಡತೊಡಗಿದೆವು.
"ನಾವು ನಿಮಗೆ ಹೇಳಿದ್ದು ಶನಿವಾರ ಕೊಡಿ ಅಂತ, ನೀವು ಎರಡು ದಿನ ಮುಂಚೆ ಬಂದು ಕಾಯ್ತಾ ಕೂತರೆ, ನಾವೇನ್ ಮಾಡೋಣ. ನಾವ್ಯಾಕೆ ದುಡ್ಡು ಕೊಡಬೇಕು. ನಿಮ್ಮ owner ಗೆ ಫೋನ್ ಮಾಡಿಕೊಡಿ, ಮಾತಾಡ್ತಿವಿ" ಅಂತ ಹೇಳಿದ ಮೇಲೆ, ಆ owner ಗೆ ಫೋನ್ ಮಾಡಿಕೊಟ್ಟ. ಕೊನೆಗೆ ಆತ ಹೇಳಿದ "ಸಾರ್, 2000 ಕೊಟ್ಟು ಬೈಕ್ ತಗೋಳಿ. ನಾನು ಆ ದುಡ್ಡನ್ನ ನಿಮ್ಮ accountಗೆ transfer ಮಾಡ್ತೀನಿ" ಅಂತ.
ಆಗ ಒಪ್ಪಿ ದುಡ್ಡು ಕೊಟ್ಟು, ಬೈಕುಗಳನ್ನ ಇಳಿಸಲು ಹೇಳಿದೆವು. ಅಲ್ಲಿದ್ದವರೆಲ್ಲ ಕೈಜೋಡಿಸಿದರು, ಅವರು ಮೂಟೆಗಳಂತೆ ಅವನ್ನು ಎಳೆದು ಇಳಿಸಿದರು.
ಬೆಳಗ್ಗೆಯಿಂದ ಏನೂ ತಿನ್ನದೆ ಇವನ ಬಳಿ ಏಗಾಡಿ ರೋಸಿ ಹೋಗಿತ್ತು. ಅವಸರದಲ್ಲಿ ಬೈಕುಗಳ ಪ್ಯಾಕಿಂಗನ್ನೆಲ್ಲಾ ಬಿಚ್ಚಿ ಎಸೆದು, ಬೈಕುಗಳಿಗೆ ಎಲ್ಲೆಲ್ಲಿ damage ಆಗಿವೆ ಎಂದು ಹುಡುಕಿದೆವು. ಶರತ್ ರ Thunderbird safe ಆಗಿತ್ತು. ಶಿವುನ ಬೈಕಿನ ಲಗೇಜ್ ಕ್ಯಾರಿಯರ್ ನಲ್ಲಿ ಸಣ್ಣ ಪುಟ್ಟ scratchesಗಳಾಗಿದ್ದವು. ಕೊನೆಗೆ ಇಳಿಸಿದ ನನ್ನ ಬೈಕಿನಲ್ಲಿ scratchesಗಳ ಜೊತೆಗೆ ಪೆಟ್ರೋಲ್ ಟ್ಯಾಂಕಿನ ಮೇಲೆ dent ಕೂಡ ಆಗಿತ್ತು. ಬೇಸರವೇನೋ ಆಯ್ತು, ಆದರೆ ಇದಕ್ಕಾಗಿ ಮತ್ತೆ ಅವನ ಬಳಿ ವಾದ ಮಾಡುವ ಉತ್ಸಾಹ ನಮಗಿರಲಿಲ್ಲ.
ಬೆಳಗ್ಗೆಯಿಂದ ಏನೂ ತಿನ್ನದೆ ಇವನ ಬಳಿ ಏಗಾಡಿ ರೋಸಿ ಹೋಗಿತ್ತು. ಅವಸರದಲ್ಲಿ ಬೈಕುಗಳ ಪ್ಯಾಕಿಂಗನ್ನೆಲ್ಲಾ ಬಿಚ್ಚಿ ಎಸೆದು, ಬೈಕುಗಳಿಗೆ ಎಲ್ಲೆಲ್ಲಿ damage ಆಗಿವೆ ಎಂದು ಹುಡುಕಿದೆವು. ಶರತ್ ರ Thunderbird safe ಆಗಿತ್ತು. ಶಿವುನ ಬೈಕಿನ ಲಗೇಜ್ ಕ್ಯಾರಿಯರ್ ನಲ್ಲಿ ಸಣ್ಣ ಪುಟ್ಟ scratchesಗಳಾಗಿದ್ದವು. ಕೊನೆಗೆ ಇಳಿಸಿದ ನನ್ನ ಬೈಕಿನಲ್ಲಿ scratchesಗಳ ಜೊತೆಗೆ ಪೆಟ್ರೋಲ್ ಟ್ಯಾಂಕಿನ ಮೇಲೆ dent ಕೂಡ ಆಗಿತ್ತು. ಬೇಸರವೇನೋ ಆಯ್ತು, ಆದರೆ ಇದಕ್ಕಾಗಿ ಮತ್ತೆ ಅವನ ಬಳಿ ವಾದ ಮಾಡುವ ಉತ್ಸಾಹ ನಮಗಿರಲಿಲ್ಲ.
ಎಲ್ಲಾ ಆಯ್ತು ಎಂದುಕೊಂಡರೆ, ಪ್ಯಾಕ್ ಮಾಡಿ ಕಳಿಸುವಾಗ ಬಿಚ್ಚಿ ಬೇರೆಯಾಗಿ ಇಟ್ಟಿದ್ದ ಬೈಕಿನ ಕನ್ನಡಿಗಳೇ ಇರಲಿಲ್ಲ.
"ಎಲ್ಲಯ್ಯಾ, mirror ಗಳು" ಎಂದರೆ, "ನನಗೆ, ಗೊತ್ತಿಲ್ಲ. ಅವರು ನನಗೆ ಕೊಟ್ಟಿದ್ದು ಇಷ್ಟೇ..."
"ಅವನ್ನು ಬೇರೆಯಾಗಿ ಇಟ್ಟಿದ್ದರೆ, ಅವು miss ಆಗಿ transportation truck ನಲ್ಲಿ ಕೇರಳ ಮುಟ್ಟಿರುತ್ತವೆ" ಅಂದ.
"ಎಲ್ಲಯ್ಯಾ, mirror ಗಳು" ಎಂದರೆ, "ನನಗೆ, ಗೊತ್ತಿಲ್ಲ. ಅವರು ನನಗೆ ಕೊಟ್ಟಿದ್ದು ಇಷ್ಟೇ..."
"ಅವನ್ನು ಬೇರೆಯಾಗಿ ಇಟ್ಟಿದ್ದರೆ, ಅವು miss ಆಗಿ transportation truck ನಲ್ಲಿ ಕೇರಳ ಮುಟ್ಟಿರುತ್ತವೆ" ಅಂದ.
"ಥೂ,,, ಇದೆಂಥಾ ಕರ್ಮ,,, ಒಂದಲ್ಲ ಒಂದು ಎಡವಟ್ಟುಗಳಾಗುತ್ತಿವೆಯಲ್ಲ" ಅಂದುಕೊಂಡೆವು.
ಮತ್ತೆ ಬೆಂಗಳೂರಿನ ಆ Transportation ವ್ಯಕ್ತಿಗೆ ಫೋನ್ ಮಾಡಿದೆವು, ಅವನು ಪ್ಯಾಕ್ ಮಾಡಿದ ಹುಡುಗರನ್ನು ವಿಚಾರಿಸಿ ಹೇಳಿದ "ಸರ್, Mirrorಗಳನ್ನ ಬೈಕುಗಳ ಜೊತೆಯೇ ಪ್ಯಾಕ್ ಮಾಡಿ ಇಟ್ಟಿದ್ದಾರೆ. ಸರಿಯಾಗಿ ನೋಡಿ" ಎಂದ.ತಕ್ಷಣ ಪ್ಯಾಕಿಂಗ್ ರಟ್ಟು ಪ್ಲಾಸ್ಟಿಕನ್ನೆಲ್ಲ ಎಸೆದಿದ್ದ ಕಸದ ರಾಶಿಯೆಡೆಗೆ ಓಡಿದೆವು, ಎಲ್ಲವನ್ನೂ ಹರಿದು ಬಿಚ್ಚಿದಾಗ ಆ Mirrors ಗಳು ಸಿಕ್ಕಿದವು. ಸದ್ಯ ಎಲ್ಲ ಸಿಕ್ಕವಲ್ಲಾ ಎಂದುಕೊಂಡೆವು.
ನಮಗೆ ಇಷ್ಟು ಹೊತ್ತು ತಮಿಳು ಹಾಗೂ ಹಿಂದಿಗೆ Translator ಆಗಿದ್ದ ವ್ಯಕ್ತಿ, ಇಷ್ಟೊಂದು ಹೊತ್ತು ನಮ್ಮ ಜೊತೆ ಇದ್ದಿದ್ದರಿಂದ ಆತನೇನೋ ನಮ್ಮಿಂದ ಸ್ವಲ್ಪ ದುಡ್ಡು expect ಮಾಡ್ತಿರ್ತಾನೆ ಅಂದುಕೊಂಡಿದ್ದೆವು. ಆದರಾತ ನಿಷ್ಕಲ್ಮಷವಾಗಿ ನಮ್ಮ ಸಹಾಯಕ್ಕಾಗಿ ಬಂದಿದ್ದ ಎಂದು ಗೊತ್ತಾಯಿತು. ಅಲ್ಲೇ ಆ ರಸ್ತೆಯಲ್ಲಿ ಇಡ್ಲಿ ಅಂಗಡಿ ಇಟ್ಟುಕೊಂಡಿದ್ದ ಆತ, ಈ ದಿನ ಅಂಗಡಿ ಮುಚ್ಸಿದ್ದರಿಂದ ಕೆಲಸವೇನೂ ಇಲ್ಲದೇ free ಇದ್ದ. ನಮ್ಮಗಳ ಮಾತು ವಾದಗಳನ್ನು ನೋಡಿ, ಅಲ್ಲಿಗೆ ಬಂದದ್ದು ನಮಗೆ ಬಹಳವೇ ಸಹಾಯವಾಯಿತು.
ನಮ್ಮ ಪ್ರವಾಸದ ವಿಷಯವನ್ನೆಲ್ಲ ಹೇಳಿದ ಮೇಲೆ, ಆತ ನಮಗೆ ಶುಭ ಕೋರಿದ. ಕೆಲವರು ಆಶ್ಚರ್ಯದಿಂದ ಸುಮ್ಮನೆ ನಮ್ಮನ್ನು, ನಮ್ಮ ಬೈಕುಗಳನ್ನು ನೋಡುತ್ತಿದ್ದರು.
ಅಷ್ಟರಲ್ಲಾಗಲೇ ಸುಮಾರು ಮೂರುವರೆ ತಾಸುಗಳಿಂದ ಹೋಟೆಲಿನಲ್ಲಿಯೇ ಕಾದು ಕುಳಿತಿದ್ದ ಶ್ವೇತಾ ಮತ್ತು ದೀಪಿಕಾ, ಆಗಾಗ message ಮಾಡಿ ಕೇಳುತ್ತಲೇ ಇದ್ದರು, "ಇನ್ನೂ ಮುಗಿಲಿಲ್ವಾ??? ಯಾಕೆ? ಏನಾಗಿದೆ?" ಅಂತ.
ಕೊನೆಗೆ ಅಲ್ಲಿದ್ದವರಿಗೆ Thanks ಹೇಳಿ, ಪಕ್ಕದ ರಸ್ತೆಯಲ್ಲೇ ಇದ್ದ ಹೋಟೆಲಿಗೆ ಬೈಕುಗಳೊಡನೆ ಹೊರಟೆವು.
* * *
(ಇಲ್ಲಿಂದ ಮುಂದೆ ನಮ್ಮ ಸುಂದರ ಪ್ರವಾಸ...)
ನಾವು ಹೋಟೆಲ್ ರೂಮು ತಲುಪಿದಾಗ ಸಮಯ 12ರ ಮೇಲಾಗಿತ್ತು. ಶ್ವೇತಾ ಮತ್ತು ದೀಪಿಕ ತಯಾರಾಗಿ ಕಾಯುತ್ತಿದ್ದರು.
ನಾವು ಮೂವರೂ ಆ bathroom ನಲ್ಲಿ ಸ್ನಾನ ಮಾಡುವ ಸಾಹಸ ಮಾಡಲಿಲ್ಲ. ಬರಿ ಬ್ರಷ್ ಮಾಡಿ ಮುಖ ತೊಳೆದುಕೊಂಡು, deodorant ಹೊಡೆದುಕೊಂಡು full fresh ಆಗಿ ಕನ್ಯಾಕುಮಾರಿ ನೋಡಲು ಹೊರಟೆವು. ಕನ್ಯಾಕುಮಾರಿ ದೇವಸ್ಥಾನ ಮತ್ತು ವಿವೇಕಾನಂದ ಬಂಡೆಗೆ ಹೋಗುವ ಸ್ಥಳ ಹೋಟೆಲಿನಿಂದ ಬರಿ 2km ಅಷ್ಟೇ ಇದ್ದದ್ದು, ಆದರೆ ಆ ಬಿಸಿಲಲ್ಲಿ ನೆಡೆಯುವ ಮನಸ್ಸಾಗಲಿಲ್ಲ ನಮಗೆ. ಹಾಗಾಗಿ ಬೈಕುಗಳನ್ನೇರಿ ಹೊರಟೆವು.
ಎಲ್ಲಕ್ಕೂ ಮೊದಲು ನಮಗೆ ಹೊಟ್ಟೆಗೆ ಏನಾದರು ಬೇಕಾಗಿತ್ತು. ದಾರಿಯಲ್ಲಿ ಮೊದಲಿಗೆ ಯಾವ ಹೋಟೆಲ್ ಸಿಗುತ್ತದೋ ಅಲ್ಲೇ ಊಟ ಅಂದುಕೊಂಡೆವು. ಮೊದಲಿಗೆ ಸಿಕ್ಕ ಎರಡೂ ಹೊಟೆಲುಗಳೂ non-veg ಆಗಿದ್ದವು, ನಾವು ಐವರೂ vegetarians ಆದ್ದರಿಂದ ಮುಂದೆ ಸಾಗಿದೆವು. ತುಸುದೂರದಲ್ಲೇ ಒಂದು ಚಿಕ್ಕ, ಅಪ್ಪಟ ತಮಿಳು ಶೈಲಿಯ ಶುದ್ಧ ಸಸ್ಯಾಹಾರಿ ಹೋಟೆಲು ಕಾಣಿಸಿತು. ಶ್ವೇತಾ ಬೈಕಿನಿಂದಿಳಿದು ತನಗೆ ಬಾರದ ತಮಿಳಿನಲ್ಲಿ ಊಟ ಸಿಗುತ್ತದೆಯೇ ಎಂದು ಕೇಳಿದರು. ಬರಿ ಅನ್ನ ಸಾಂಬಾರ್ ಅಷ್ಟೇ ಸಿಗುವುದು ಎಂದು ಹೇಳಿದರು. ನಮಗೂ ಅಷ್ಟೇ ಬೇಕಿದ್ದಿದ್ದು, ಯಾಕಂದ್ರೆ ಪ್ರವಾಸದ ಸಮಯದಲ್ಲಿ ನಮ್ಮ ಆಹಾರದ ಬಗ್ಗೆಯೂ ಹುಷಾರಾಗಿರಬೇಕಾಗಿದ್ದಿದ್ದು ಮುಖ್ಯವಾಗಿತ್ತು.
ಆ ಹೋಟೆಲಿನ ಮಾಲೀಕ ತಾತ, ತಮಿಳಿನಲ್ಲಿ ಏನೇನೋ ವಿವರಿಸಿ ಹೇಳಿ ಊಟ ಬಡಿಸಿದರು.
ಊಟ ರುಚಿಕಟ್ಟಾಗಿತ್ತು.
ಮೊದಲು "ವಿವೇಕಾನಂದ ಮೆಮೋರಿಯಲ್ ರಾಕ್" ನೋಡೋಣವೆಂದು beachಗೆ ಸಾಗಿದೆವು. ಅಲ್ಲಾಗಲೇ ಬಹಳಷ್ಟು ಉದ್ದದ queue ಇತ್ತು. ಶ್ವೇತಾ ಮತ್ತು ದೀಪಿಕಾರನ್ನು ಇಳಿಸಿ, ನೀವು queueನಲ್ಲಿ ನಿಂತು ಮೊದಲು ticket ತೆಗೆದುಕೊಳ್ಳಲು ಹೇಳಿ, ನಾವು ಅಲ್ಲೆಲ್ಲಾ ಸುತ್ತಾಡಿ ಎಲ್ಲೂ parking ವ್ಯವಸ್ಥೆಯಿಲ್ಲದೆ, ಮುಂದೆಲ್ಲೋ ಇದ್ದ ಸಣ್ಣ ಓಣಿ ರಸ್ತೆಯಲ್ಲಿ park ಮಾಡಿ ಬಂದೆವು.
ಅಷ್ಟರಲ್ಲವರು queueನಲ್ಲಿರದೆ ಇನ್ನೊಂದು ಕಡೆ ಕಾಯುತ್ತಾ ನಿಂತಿದ್ದವರು, "ಅದು general queue, ಇಲ್ಲಿಂದ special entrance ಇದೆ. 170ರು ticket" ಅಂದರು. Ticket ಕೊಂಡ ಮೇಲೆ, ಅಲ್ಲಿಂದ ಸೀದಾ Ferry ಬಳಿಗೆ ಹಿಂದಾರಿಯಿಂದ ಕಳಿಸಿದರು. Lifesaver jacket ತೊಟ್ಟು ತಯಾರಾದ ಒಂದೆರಡು ನಿಮಿಷಗಳಲ್ಲೇ ಬಂದ ferryಗೆ ಹತ್ತಿ, ತೂಗಾಡುತ್ತಾ ತೆಲಾಡುತ್ತ ಸಾಗಿ Rock ತಲುಪಿದೆವು. ಅಲ್ಲಿ ಪ್ರವೇಶಕ್ಕೆ ಮತ್ತೊಂದು ticket, ತೆಗೆದುಕೊಂಡು ದೊಡ್ಡ ಬಂಡೆಯ ಪುಟ್ಟ ಪುಟ್ಟ ಮೆಟ್ಟಿಲನತ್ತಿದೆವು.
ಅದೊಂದು ಏಕಶಿಲೆ, ಭಾರತದ ದಕ್ಷಿಣ ಭೂಭಾಗವಾದ ಕನ್ಯಾಕುಮಾರಿಯ ಸಮುದ್ರ ತೀರದಿಂದ, ಒಂದು ಮೈಲಿ ಆಚೆಗೆ ಸಣ್ಣ ದ್ವೀಪವೆಂಬಂತೆ ನಿಂತಿದೆ. Indira Point ಅನ್ನು ಅಧಿಕೃತವಾಗಿ ಭಾರತದ ದಕ್ಷಿಣ ತುದಿಯೆಂದು ಘೋಷಿಸುವವರೆಗೂ, ಈ ಶಿಲೆಯನ್ನೇ ದಕ್ಷಿಣ ತುದಿಯೆಂದು ತಿಳಿಯಲಾಗಿತ್ತು.
ಭವ್ಯ ಭಾರತದ ಕನಸನ್ನೊತ್ತು ಬಂದ ವಿವೇಕಾನಂದರು, ಆಗಿನ ಅನಕ್ಷರಸ್ಥ, ಬಡತನ, ಮೂಢನಂಬಿಕೆ, ಗುಲಾಮಗಿರಿಯ ಸಂಕೋಲೆಯಿಂದ ಭಾರತಾಂಬೆಯನ್ನು ಉದ್ಧರಿಸುವ ಮಾರ್ಗ ಹುಡುಕುತ್ತಾ ದೇಶ ಪರ್ಯಟನೆ ಮಾಡಿಕೊಂಡು ಬಂದು, ಕನ್ಯಾಕುಮಾರಿ ತಲುಪಿದರು.
ಕನ್ಯಾಕುಮಾರಿಗೆ ಪೌರಾಣಿಕ ಹಿನ್ನಲೆಯೂ ಇದ್ದು, ಪಾರ್ವತಿ ದೇವಿಯ ಅವತಾರವೆನ್ನುವ ಕನ್ಯಾಕುಮಾರಿಯು ನೆಲೆಸಿದ ತಾಣವದು.
ಇಲ್ಲಿಗೆ ಬಂದ ವಿವೇಕಾನಂದರು, ಕನ್ಯಾಕುಮಾರಿ ದೇವಸ್ಥಾನ ದರ್ಶಿಸಿ ಹೊರಬಂದು, ಈ ದ್ವೀಪದಂತಿರುವ ಬಂಡೆಯನ್ನು ಕಂಡರು. ಅದು ಅವರನ್ನು ತನ್ನತ್ತ ಸೆಳೆಯಿತು, ಅಲ್ಲಿಯೇ ತೀರದಲ್ಲಿದ್ದ ಮೀನುಗಾರ ದೋಣಿಯನೊಬ್ಬನಿಗೆ ತನ್ನನ್ನು ಅಲ್ಲಿಗೆ ತಲುಪಿಸುವಂತೆ ಕೇಳಿಕೊಂಡರು. ಆತ ತನಗೆ ಕಾಸು ಕೊಟ್ಟರಷ್ಟೇ ಅಲ್ಲಿಗೆ ತಲುಪಿಸುವೆನೆಂದು ಹೇಳಿದ. ಒಂದು ನಯಾಪೈಸೆಯೂ ಇಲ್ಲದ ಸನ್ಯಾಸಿ ವಿವೇಕಾನಂದರು, ಕಾವಿಯನ್ನು ಕಚ್ಚೆಯಂತೆ ಕಟ್ಟಿ, ಮರುಕ್ಷಣದಲ್ಲಿಯೇ ಸಮುದ್ರಕ್ಕೆ ಹಾರಿ ಈಜತೊಡಗಿದರು. ತನಗೇನಾಗಬೇಕೆಂದುಕೊಂಡು ಆ ದೋಣಿಯವನು, ಸುಮ್ಮನಾದನು. ಅಲೆ ಅಲೆಯ ಹೊಡೆತಗಳ ನಡುವೆಯೇ, ಈಜಿಕೊಂಡು ಬಂಡೆಯನ್ನು ತಲುಪಿದ ವಿವೇಕಾನಂದರು, ಉತ್ತರದತ್ತ ಮುಖ ಮಾಡಿ ಕುಳಿತು, ತಾಯಿಯ ಪಾದದ ಬಳಿ ಕುಳಿತ ಮಗನಂತೆ, ಭಾರತಾಂಬೆಯನ್ನು ಅಡಿಯಿಂದ ಮುಡಿಯವರೆಗೆ ಪೂಜಿಸುತ್ತ ಧ್ಯಾನಾಸಕ್ತರಾದರು. ಧ್ಯಾನಾವಸ್ಥೆಯಲ್ಲೇ ಮೂರುದಿನಗಳನ್ನು ಅನ್ನಾಹಾರವಿಲ್ಲದೇ ಕಳೆದು ಜ್ಞಾನೋದಯ ಸಾಧಿಸಿದರು. ಅಷ್ಟರಲ್ಲಿ ಇತ್ತ ಆ ದೋಣಿಯವನು ಊರಿನವರಿಗೆ ವಿಷಯ ತಿಳಿಸಿದನು, "ಹೀಗೆ ಮೂರು ದಿನಗಳ ಹಿಂದೆ ಸ್ವಾಮಿಯೊಬ್ಬರು ಈಜಿ ಆ ಬಂಡೆಗೆ ಹೋಗಿದ್ದಾರೆ" ಎಂದು. ಕುತೂಹಲಗೊಂಡ ಸ್ಥಳೀಯರು, ದೋಣಿಯಲ್ಲಿ ಅಲ್ಲಿ ತಲುಪಿ, ಧ್ಯಾನಾವಸ್ಥೆಯಲ್ಲಿದ್ದ ವಿವೇಕಾನಂದರನ್ನು ಎಚ್ಚರಿಸಿ, ಸತ್ಕರಿಸಿ ವಾಪಸ್ಸು ಕರೆತಂದರು. ಅಲ್ಲಿಂದ ಮುಂದೆ ನೆಡೆದದ್ದು ಇತಿಹಾಸ.
ವಿವೇಕಾನಂದರಿಗೆ ಜ್ಞಾನೋದಯವಾದ ಸ್ಮರಣಾರ್ಥ ಅಲ್ಲಿ, ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಅಲ್ಲಿ ದೇವಸ್ಥಾನದ ರೀತಿಯ ಮಂಟಪ ಒಂದಿದ್ದು, ಒಳಗೆ ವಿವೇಕಾನಂದರ ಭವ್ಯ ವಿಗ್ರಹವಿದೆ. ಪಕ್ಕದಲ್ಲೇ ಅಂಟಿಕೊಂಡಂತಿರುವ ಇನ್ನೊಂದು ಬಂಡೆಯಲ್ಲಿ ತಮಿಳಿನ ಮಹಾಕವಿ ತಿರುವಳ್ಳುವರ್ ಮಹಾಪ್ರತಿಮೆಯಿದೆ. ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು, ಹಾಗಾಗಿ ದೂರದಿಂದ ಆ ನೀಲಿ ಸಾಗರದ ಮೇಲೆ ನಿಂತ ನೀಲ ಮೂರ್ತಿಯ ದೃಶ್ಯ ಕಣ್ತುಂಬಿಕೊಂಡೆವು.
ಮಧ್ಯಾಹ್ನದ ಬಿಸಿಲಿಗೆ ಕಲ್ಲು ಬಹಳಷ್ಟು ಕಾದು, ಕಾಲಿಟ್ಟರೆ ಸುಡುವಂತಿತ್ತು. ಪ್ರಾಂಗಣದಲ್ಲಿ ಹಾಸಿದ್ದ mat ಬಿಟ್ಟು ಹೊರಗೆ ನಿಲ್ಲಲಾರದಂತಿತ್ತು. ಸಮುದ್ರ ತೀರದ ಗಾಳಿ ಜೋರಾಗಿ ಬೀಸುತಿತ್ತು. ಒಂದು ಕಡೆಗೆ ಕನ್ಯಾಕುಮಾರಿಯ ತೀರದ ನೋಟ, ಇನ್ನೊಂದು ಕಡೆಗೆ ಕಣ್ಣಿಗೆ ಕಾಣದಷ್ಟು ದೂರಕ್ಕೆ, ನೀಲಿ ಸಾಗರದ ಮೇಲೆ ತಿಳಿ ನೀಲಿ ದಿಗಂತದ ವಿಹಂಗಮ ನೋಟ. ಅಲೆಗಳು ಆಗಾಗ ಬಂಡೆಗೆ ಅಪ್ಪಳಿಸುವ ನೀರ ನಿನಾದ, ಉಲ್ಲಾಸಭರಿತವಾಗಿತ್ತು.
ಒಂದೆರಡು ತಾಸುಗಳನ್ನು ಆ ಅಮೋಘ ಶಿಲಾತಪೋಭೂಮಿಯಲ್ಲಿ ಕಳೆದು, ವಾಪಸ್ಸಾದೆವು. ಅಲ್ಲಿಗೆ ಹೋಗುವಾಗ ಕೊಂಡಿದ್ದ special entry ticket, ವಾಪಸ್ಸು ಬರುವಾಗ valid ಇಲ್ಲ. ಹಾಗಾಗಿ, ಎಲ್ಲರಿಗೂ ಒಂದೇ queue. ಸುಮಾರು ಒಂದರ್ದ ತಾಸು ferry ಗಾಗಿ ಕಾಯಬೇಕಾಯಿತು. ನಾವು ನಿಂತಿದ್ದ ಸಾಲಿನಲ್ಲಿ, ಹಲವು ವಿದೇಶಿ ಪ್ರವಾಸಿಗರೂ ಇದ್ದರು. ನಡುವೆ ಒಂದು ಉತ್ತರ ಭಾರತದಿಂದ ಬಂದಿದ್ದ ಪ್ರವಾಸಿಗರ ಗುಂಪೂ ಇತ್ತು. ಅದರಲ್ಲೊಬ್ಬ ಯುವಕ, ಪೂರ ಖಾವಿ ತೊಟ್ಟು, ವಿವೇಕಾನಂದರ ರೂಪಿನಲ್ಲಿ ಬಂದಿದ್ದ. ಆತನೊಡನೆ ಹಲವು ವಿದೇಶಿ ಪ್ರವಾಸಿಗರು selfie ತೆಗೆದುಕೊಳ್ಳುತ್ತಿದ್ದರು. ಆತ ನಿಜವಾಗಿಯೂ ಸನ್ಯಾಸಿಯೋ ಅಥವಾ ಸುಮ್ಮನೇ ಹಾಗೇ ಖುಷಿಗಾಗಿ ಆ ವೇಷ ಹಾಕಿದ್ದನೋ ತಿಳಿಯಲಿಲ್ಲ, ಆದರೆ ಆತನ ಮುಖದಲ್ಲಿ ಒಂದು ವಿಶೇಷ ಕಳೆಯೊಂದಿತ್ತು.
Ferry ಬಂದೊಡನೆ, ಅವಸರವಾಗಿ life jacket ತೊಟ್ಟು ride enjoy ಮಾಡಲು ಮುಂಬಾಗದ ಸಾಲಿನಲ್ಲಿ ಕುಳಿತೆವು. ಈ ಬಾರಿಯ ride ಒಂದೆರಡು rough waves ಗಳಿಂದಾಗಿ, ಹಾರಿ ಹಾರಿ ಇಳಿದು, ರೋಮಾಂಚಕವಾಗಿತ್ತು. ಸಾಲಿನ ತುದಿಯಲ್ಲಿ ಕುಳಿತಿದ್ದ ಶ್ವೇತಾ, ಅಲೆ ಅಪ್ಪಳಿಸಿ ಚಿಮ್ಮಿದ ನೀರಿನಿಂದಾಗಿ ಅರೆ ಬರೆ ನೆಂದು ಹೋಗಿ, ಇರಿಸುಮುರಿಸಾದರು. ನಾವ್ಯಾರೂ ನೆನೆಯಲಿಲ್ಲ, ಹಾಗಾಗಿ ಹಾಸ್ಯಮಾಡಿ ಎಲ್ಲರೂ ನಕ್ಕೆವು.
ಕನ್ಯಾಕುಮಾರಿ ಮಂದಿರ ನೋಡಲು, ನಮಗೆ ಸಮಯ ಉಳಿದಿರಲಿಲ್ಲ. ನಾವಿನ್ನೂ ನಮ್ಮ ಮೊದಲ ದಿನದ bike ride ಶುರು ಮಾಡಿರಲಿಲ್ಲ. ಮೊದಲ ದಿನದ plan ಪ್ರಕಾರ ಇಂದು ರಾತ್ರಿಗೆ ಉಳಿಯಲು ಮಧುರೈ ತಲುಪಬೇಕಿತ್ತು. ಹಾಗಾಗಿ ತಡಮಾಡದೇ ಒಣಗಿದ್ದ ಬಾಯಿಗೆ ಎಳನೀರು ಕುಡಿದು ಹೋಟೆಲ್ ಕಡೆಗೆ ಓಡಿದೆವು.
ರೂಮಿಗೆ ಬಂದ ತಕ್ಷಣ ನಮ್ಮ ವೇಷಭೂಷಣಗಳನ್ನೆಲ್ಲಾ (Jacket, Gloves, Knee pads, Riding Shoes) ತೊಟ್ಟು, ಮೊದಲೇ ತಯಾರು ಮಾಡಿಟ್ಟಿದ್ದ bagಗಳನ್ನೆಲ್ಲಾ ಬೈಕುಗಳಿಗೆ ಕಟ್ಟಿದೆವು. ನನ್ನ ಬೈಕಿನಲ್ಲಿ ನಾನೊಬ್ಬನೇ ಇದ್ದಿದ್ದರಿಂದ trip ಸಲುವಾಗಿ ಖರೀದಿಸಿದ್ದ accessories, tools n extra ಅನಿಸಿದ other things ಎಲ್ಲವನ್ನೂ ನನ್ನ ಬೈಕಿನ ಹಿಂದಕ್ಕೆ ಕಟ್ಟಿಕೊಂಡೆ. ಶರತ್-ಶ್ವೇತಾ, ಅವರ ಲಗೇಜುಗಳನ್ನು perfect ಆಗಿ arrange ಮಾಡಿ ತಂದಿದ್ದರು, ಹಾಗಾಗಿ ಏನೂ ಅಡಚಣೆಯಾಗದಂತೆ, ಬೈಕಿಗೆ ಲೋಡ್ ಮಾಡಿದರು. ಶಿವು-ದೀಪಿಕಾ, ಸ್ವಲ್ಪ ಹೆಚ್ಚು ಲಗೇಜು ಹೊತ್ತು ತಂದಿದ್ದರು, ಬೈಕಿನ ಲಗೇಜ್ ಕ್ಯಾರಿಯರಿಗೆ ಹಿಡಿಸಲಾರದಷ್ಟು ದೊಡ್ಡ ಬ್ಯಾಗೊಂದಿತ್ತು. ಆದರೂ ಅದನ್ನು ಹೇಗೋ ಬಿಗಿದು ಕಟ್ಟಿದೆವು. ಆದರೆ ಅಷ್ಟನ್ನೂ ಪೂರ್ತಿ trip ಹೊತ್ತು manage ಮಾಡುವುದು ಕಷ್ಟವಿತ್ತು. ಹಿಂಬದಿ ಕೂರುವ ದೀಪಿಕಾಗೆ ಅಷ್ಟು ಲಗೇಜಿನಿಂದಾಗಿ ಬಹಳಷ್ಟು ಇರಿಸು ಮುರಿಸಂತೂ ಕಾದಿತ್ತು.
ಬೈಕುಗಳನ್ನು ready to ride ಮಾಡಿ, ಸಮಯ ಸಂಜೆಯ 4.30ರ ಹೊರಡುವ ಶುಭಗಳಿಗೆಯ ನೆನಪಿಗೆ photo ಕ್ಲಿಕ್ಕಿಸಿಕೊಂಡು ಹೊರಟು, ಅಲ್ಲೇ ಮುಂದೆ ಬೈಕುಗಳಿಗೆ full tank petrol ತುಂಬಿಸಿಕೊಂಡು ಮಧುರೈ ಹಾದಿ ಹಿಡಿದೆವು.
ಹಿಂಬದಿ ಸವಾರಾಗಿದ್ದ ಶ್ವೇತ ಮತ್ತು ದೀಪಿಕರ ಜವಾಬ್ದಾರಿ, ಪೂರ್ತಿ tripಗೆ map ಗಳಿಂದ ನಮಗೆ route & navigate ಮಾಡವುದಾಗಿತ್ತು. ಹಾಗಾಗಿ, ಹಿಂಬದಿ navigator ಇದ್ದ ಶರತ್ ಅಥವಾ ಶಿವು ಇಬ್ಬರಲ್ಲೊಬ್ಬರು ಯಾವಾಗಲೂ ಮುಂದೆ ಸಾಗಬೇಕಾಗಿಯೂ, ಮಧ್ಯದಲ್ಲಿ ಒಬ್ಬನೇ rider ಆದ ನಾನು follow ಮಾಡಬೇಕೆಂದು, ನನ್ನ ಹಿಂದೆ ಉಳಿದ ಇನ್ನೊಬ್ಬರು (with navigator rider) ಬರಬೇಕೆಂದು ಯೋಚಿಸಿಕೊಂಡೆವು.
ನಾವು ರಾತ್ರಿಯೊಳಗೆ 250km ಕ್ರಮಿಸಬೇಕಿತ್ತು. ಇದಿನ್ನೂ ಮೊದಲ ದಿನವಾದ್ದರಿಂದಲೋ ಏನೋ, ಮೂವರೂ (ಮೂರೂ ಬೈಕುಗಳು) ಹೊಂದಾಣಿಕೆಯ ವೇಗದಲ್ಲಿ ಸಾಗುವದು ಕಷ್ಟವಿತ್ತು. ಶರತ್ ಮುಂದೆ ಹೋಗುತ್ತಿದ್ದರು, ನಾನು ತುಸು ಆರಾಮಾಗಿಯೇ ಅವರನ್ನ ಹಿಂಬಾಲಿಸುತ್ತಿದ್ದೆ. ಆದರೆ ಶಿವು ಮಾತ್ರ ನಮ್ಮಿಂದ ಹಿಂದೆ ಹಿಂದೆ ಉಳಿಯುತ್ತಿದ್ದ.
ಹಿಂಬದಿ ಸವಾರಾಗಿದ್ದ ಶ್ವೇತ ಮತ್ತು ದೀಪಿಕರ ಜವಾಬ್ದಾರಿ, ಪೂರ್ತಿ tripಗೆ map ಗಳಿಂದ ನಮಗೆ route & navigate ಮಾಡವುದಾಗಿತ್ತು. ಹಾಗಾಗಿ, ಹಿಂಬದಿ navigator ಇದ್ದ ಶರತ್ ಅಥವಾ ಶಿವು ಇಬ್ಬರಲ್ಲೊಬ್ಬರು ಯಾವಾಗಲೂ ಮುಂದೆ ಸಾಗಬೇಕಾಗಿಯೂ, ಮಧ್ಯದಲ್ಲಿ ಒಬ್ಬನೇ rider ಆದ ನಾನು follow ಮಾಡಬೇಕೆಂದು, ನನ್ನ ಹಿಂದೆ ಉಳಿದ ಇನ್ನೊಬ್ಬರು (with navigator rider) ಬರಬೇಕೆಂದು ಯೋಚಿಸಿಕೊಂಡೆವು.
ನಾವು ರಾತ್ರಿಯೊಳಗೆ 250km ಕ್ರಮಿಸಬೇಕಿತ್ತು. ಇದಿನ್ನೂ ಮೊದಲ ದಿನವಾದ್ದರಿಂದಲೋ ಏನೋ, ಮೂವರೂ (ಮೂರೂ ಬೈಕುಗಳು) ಹೊಂದಾಣಿಕೆಯ ವೇಗದಲ್ಲಿ ಸಾಗುವದು ಕಷ್ಟವಿತ್ತು. ಶರತ್ ಮುಂದೆ ಹೋಗುತ್ತಿದ್ದರು, ನಾನು ತುಸು ಆರಾಮಾಗಿಯೇ ಅವರನ್ನ ಹಿಂಬಾಲಿಸುತ್ತಿದ್ದೆ. ಆದರೆ ಶಿವು ಮಾತ್ರ ನಮ್ಮಿಂದ ಹಿಂದೆ ಹಿಂದೆ ಉಳಿಯುತ್ತಿದ್ದ.
ಕನ್ಯಾಕುಮಾರಿಯ ಹೊರವಲಯ ದಾಟಿದ ಮೇಲೆ ಸಿಗುವ ಸಾಲುಗಟ್ಟಲೆ wind mills ಗಳು, ಆ ಸಂಜೆ ಸಮಯದ ಬಣ್ಣತುಂಬಿದ ಆಗಸದಲ್ಲಿ ಕಣ್ಣಿಗೆ ಹಬ್ಬದಂತಿದ್ದವು.
ಸುಮಾರು 30-40km ಹಾದಿಯಲ್ಲಿ ಸಾಗಿದ್ದೆವು, ಶಿವು ಮತ್ತು ದೀಪಿಕಾ ಕಾಣುತ್ತಿಲ್ಲವಲ್ಲ ಎಂದು ನಾವು ಬೈಕುಗಳನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಕಾಯತೊಡಗಿದೆವು. ಒಂದೈದು ನಿಮಿಷಗಳ ಬಳಿಕ ಬಂದ ಅವರಿಗೆ, ಯಾಕೆ ನಿಧಾನವಾಯ್ತು, ನಮ್ಮನ್ನ ಹಿಂಬಾಲಿಸುತ್ತಾ ಬನ್ನಿ, ಕನಿಷ್ಠ rear view mirrors ನಲ್ಲಿ ಕಾಣುವಷ್ಟು ಅಂತರವನ್ನಾದರೂ ಕಾದಿರಿಸುತ್ತ ಬರಬೇಕೆಂದು ಹೇಳಿದೆವು. ಹಾಗೇ ನಿಲ್ಲಿಸಿದ್ದಾಗ ಹಿಂದೆಯಿಂದ ಅವರ ಬೈಕನ್ನು ನೋಡಿದ ನಾನು, ಅವರ ಬೈಕಿಂದ number plate ನ, ಎರಡರಲ್ಲಿ ಒಂದು bolt ಉದುರಿ ಹೋಗಿ, ಅದು ಒಂದೇ ಒಂದು bolt ನಲ್ಲಿ ಇನ್ನೇನು ಇದೂ ಉದುರಿ ಹೋಗುವುದೇನೋ ಎನ್ನುವಂತೆ ನೇತಾಡುತಿತ್ತು. "ಹೇ, ಏನೋ ಇದು" ಎಂದು ಕೇಳಿದಾಗ ಅವರಿಬ್ಬರೂ ಬೈಕಿನಿಂದ ಇಳಿದು ನೋಡಿದರು. ಅವರಿಬ್ಬರೂ ಇಳಿದಾಗ, ಅವರ ಬೈಕಿನ battery box cover ಕೂಡ ಎಲ್ಲೋ ಉದುರಿ ಹೋಗಿರುವುದು ಕಾಣಿಸಿತು. "ಇವೆಲ್ಲಾ ಬೈಕಿಂದ ಬಿದ್ದು ಹೋದ್ರೂ ನಿಮ್ಮಿಬ್ಬರಿಗೂ ಗೊತ್ತಾಗಲಿಲ್ಲವೇನ್ರೋ" ಅಂತ ಕೇಳಿದಾಗ, ಇಬ್ಬರೂ ಮುಖ ಮುುಖ ನೋಡಿದ್ರು.
ಸರಿ, ಇನ್ನೇನೂ ಮಾಡೋಕಾಗಲ್ಲ, battery cover ನ ನಾಳೆ ಇಲ್ಲ ನಾಡಿದ್ದು ಎಲ್ಲಾದರೂ Royal Enfield Shop ಅಲ್ಲಿ ಹಾಕಿಸಿಕೊಳ್ಳೋಣ, ಸಧ್ಯ number plate ಬಿದ್ದೋಗಲಿಲ್ಲವಲ್ಲ ಎಂದು, ನಮ್ಮ ಹತ್ತಿರ ಇದ್ದ spare bolt ಹಾಕಿ number plate ಸರಿ ಮಾಡಿಕೊಂಡು, ಮುಂದೆ ಹೊರಟೆವು.
ಸುಮಾರು 30-40km ಹಾದಿಯಲ್ಲಿ ಸಾಗಿದ್ದೆವು, ಶಿವು ಮತ್ತು ದೀಪಿಕಾ ಕಾಣುತ್ತಿಲ್ಲವಲ್ಲ ಎಂದು ನಾವು ಬೈಕುಗಳನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಕಾಯತೊಡಗಿದೆವು. ಒಂದೈದು ನಿಮಿಷಗಳ ಬಳಿಕ ಬಂದ ಅವರಿಗೆ, ಯಾಕೆ ನಿಧಾನವಾಯ್ತು, ನಮ್ಮನ್ನ ಹಿಂಬಾಲಿಸುತ್ತಾ ಬನ್ನಿ, ಕನಿಷ್ಠ rear view mirrors ನಲ್ಲಿ ಕಾಣುವಷ್ಟು ಅಂತರವನ್ನಾದರೂ ಕಾದಿರಿಸುತ್ತ ಬರಬೇಕೆಂದು ಹೇಳಿದೆವು. ಹಾಗೇ ನಿಲ್ಲಿಸಿದ್ದಾಗ ಹಿಂದೆಯಿಂದ ಅವರ ಬೈಕನ್ನು ನೋಡಿದ ನಾನು, ಅವರ ಬೈಕಿಂದ number plate ನ, ಎರಡರಲ್ಲಿ ಒಂದು bolt ಉದುರಿ ಹೋಗಿ, ಅದು ಒಂದೇ ಒಂದು bolt ನಲ್ಲಿ ಇನ್ನೇನು ಇದೂ ಉದುರಿ ಹೋಗುವುದೇನೋ ಎನ್ನುವಂತೆ ನೇತಾಡುತಿತ್ತು. "ಹೇ, ಏನೋ ಇದು" ಎಂದು ಕೇಳಿದಾಗ ಅವರಿಬ್ಬರೂ ಬೈಕಿನಿಂದ ಇಳಿದು ನೋಡಿದರು. ಅವರಿಬ್ಬರೂ ಇಳಿದಾಗ, ಅವರ ಬೈಕಿನ battery box cover ಕೂಡ ಎಲ್ಲೋ ಉದುರಿ ಹೋಗಿರುವುದು ಕಾಣಿಸಿತು. "ಇವೆಲ್ಲಾ ಬೈಕಿಂದ ಬಿದ್ದು ಹೋದ್ರೂ ನಿಮ್ಮಿಬ್ಬರಿಗೂ ಗೊತ್ತಾಗಲಿಲ್ಲವೇನ್ರೋ" ಅಂತ ಕೇಳಿದಾಗ, ಇಬ್ಬರೂ ಮುಖ ಮುುಖ ನೋಡಿದ್ರು.
ಸರಿ, ಇನ್ನೇನೂ ಮಾಡೋಕಾಗಲ್ಲ, battery cover ನ ನಾಳೆ ಇಲ್ಲ ನಾಡಿದ್ದು ಎಲ್ಲಾದರೂ Royal Enfield Shop ಅಲ್ಲಿ ಹಾಕಿಸಿಕೊಳ್ಳೋಣ, ಸಧ್ಯ number plate ಬಿದ್ದೋಗಲಿಲ್ಲವಲ್ಲ ಎಂದು, ನಮ್ಮ ಹತ್ತಿರ ಇದ್ದ spare bolt ಹಾಕಿ number plate ಸರಿ ಮಾಡಿಕೊಂಡು, ಮುಂದೆ ಹೊರಟೆವು.
ಈ ದಿನದ ಪ್ರಯಾಣದ ಮಧ್ಯೆ ಸಿಗುವ, ತಿರುನಲ್ವೇಲಿಯಲ್ಲಿ ಅಲ್ಲಿನ famous ಹಲ್ವಾ ತಿಂದು ಹೋಗಬೇಕೆಂಬೆದು ನಮ್ಮ ಪ್ಲಾನಿನಲ್ಲಿತ್ತು. ಆದರೆ ನಾವು ಹೆದ್ದಾರಿಯಲ್ಲಿ ಸಾಗುತ್ತ ಸಾಗುತ್ತ ಇದ್ದಂತೆಯೇ ಇನ್ನೂ ಮುಂದೆ ಇದೆ, ಅಂದುಕೊಳ್ಳುತ್ತ ಬಂದ ತಿರುನಲ್ವೇಲಿಯನ್ನು ಬೈಪಾಸಿನಲ್ಲಿ ದಾಟಿ, ಇನ್ನೂ ಮುಂದೆ ಬಂದಾದ ಮೇಲೆ,,, ಅಯ್ಯೋ ನಮಗೆ ದಾರಿ ತಿಳಿಯಲಿಲ್ಲವಲ್ಲ ಎಂದು ಬೇಸರಗೊಂಡೆವು. ಹಲ್ವಾ miss ಆಯ್ತು.
ಇನ್ನ 50km ಸಾಗುವಷ್ಟರಲ್ಲಿ ಮತ್ತೆ ಅದೇ ರಾಗ, ಶಿವು-ದೀಪಿಕಾರ ಬೈಕ್ ನಮ್ಮಿಂದ ಬಹಳ ಹಿಂದೆ ಉಳಿದಿತ್ತು. ಆದರೂ ನಾನು ಮತ್ತು ಶರತ್ ನಿಧಾನ ಮಾಡುವುದು ಬೇಡವೆಂದು, ಮುಂದುವರಿಯುತ್ತಲೇ ಇದ್ದೆವು. ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಒಂದು Royal Enfield Service Center ನೋಡಿದ ಶ್ವೇತ, ಶರತ್ ಗೆ ಬೈಕ್ ನಿಲ್ಲಿಸಲು ಹೇಳಿದ್ದಾರೆ. ಹಾಗಾಗಿ ಶರತ್ ತಕ್ಷಣ ಬೈಕನ್ನು ರಸ್ತೆಯ ಪಕ್ಕಕ್ಕೆ ತಿರುಗಿಸಿ ನಿಲ್ಲಿಸಿದರು. ಅವರ ಹಿಂದೆಯೇ ನಾನೂ ತಕ್ಷಣವೇ ಬೈಕನ್ನು ನಿಲ್ಲಿಸಿ, ಶಿವು ಬಂದರೆ ನಿಲ್ಲಿಸಲು ಹೇಳೋಣವೆಂದು ಕಾಯತೊಡಗಿದೆವು.
ಆದರೆ, ನಾವು ನಿಂತಿದ್ದ ಜಾಗದಿಂದ ಸುಮಾರು 300 ಮೀಟರ್ ದೂರದಲ್ಲಿ, ಮರೆಯಲ್ಲಿ ನಿಂತು racing ಮಾಡುವವರನ್ನು ಹಿಡಿಯಲು ಕಾಯುವ highway police, ಜೀಪನ್ನು ಮರೆಯಲ್ಲಿ ನಿಲ್ಲಿಸಿಕೊಂಡಿದ್ದರು. ಅಲ್ಲಿ ಕಾದಿದ್ದ ಅವರಿಗೆ, ನಾವು ವೇಗವಾಗಿ ಬಂದು, ಅವರು ಕಂಡ ಕೂಡಲೇ ಅಲ್ಲೇ ದೂರದಲ್ಲಿ ನಿಲ್ಲಿಸಿಕೊಂಡಿದ್ದು, ಕಳ್ಳರು ಪೋಲೀಸರನ್ನ ನೋಡಿ ಕದ್ದು ಅವಿತುಕೊಂಡಂತೆ ಅನ್ನಿಸಿದೆ. ನಾವು ಅವರ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ, ಆದರವರು ಯಾರೋ ಮಹಾನ್ ಕಳ್ಳರನ್ನ ಹಿಡಿಯುವವರಂತೆ, ಎದ್ದು ಬಿದ್ದು ಓಡಿ ಬರತೊಡಗಿದರು.
ಅಷ್ಟರಲ್ಲಿ ಶಿವು-ದೀಪಿಕಾ ಕೂಡ ಬೈಕಿನಲ್ಲಿ ಬಂದರು, ನಾವವರನ್ನ ತಡೆದು ನಿಲ್ಲುವಂತೆ ಹೇಳಿದೆವು. ನಾವಿಲ್ಲಿ ಯಾಕೆ ನಿಂತಿರುವೆವೆಂದು ಅವರಿಗೆ ಗೊತ್ತೇ ಇಲ್ಲ, ಬಂದು ಬೈಕನ್ನು ನಮ್ಮ ಪಕ್ಕ ನಿಲ್ಲಿಸಿದರು.
ಅಷ್ಟರಲ್ಲಿ ಆ ಪೊಲೀಸರಲ್ಲಿ ಮುಂದಿದ್ದವನು ನಮ್ಮ ಹತ್ತಿರ ಬಂದಾಗಿತ್ತು. ಅವನ ಮುಖಚರ್ಯೆಯಾಗಲಿ, ಬಂದು ವ್ಯವಹರಿಸತೊಡಗಿದ ರೀತಿಯಾಗಲಿ, ಒಂದೂ ನಯಾ ಪೈಸಾ ಮರ್ಯಾದೆ ಕೊಡುವಂತಿರಲಿಲ್ಲ. ಅವನ ಕಣ್ಣಿನ ತುಂಬಾ ಇವತ್ತಿನ ಮಟ್ಟಿಗೆ ಲಂಚ ಸಿಕ್ಕೀತೆಂಬ ದುರಾಸೆಯೊಂದೇ ಕಾಣುತಿತ್ತು
ನಮ್ಮಲ್ಲಿ ಪೊಲೀಸರಿಗೆ, ತುಂಡು ರಾಜಕಾರಣಿಗಳಿಗೆ ಮತ್ತು ಕೆಲವು ಇಲಾಖೆಯ ಸರ್ಕಾರಿ ನೌಕರರಿಗೆ ಇರುವಷ್ಟು ದರ್ಪ, ದುರಹಂಕಾರ, ಬೇರೆ ಇನ್ನ್ಯಾರಿಗೂ ಇರುವುದಿಲ್ಲ. ಇಲ್ಲಿ ಈ ಪೊಲೀಸರು ನಮ್ಮೊಡನೆ ಗೌರವದಿಂದ ವ್ಯವಹರಿಸಲಿಲ್ಲ ಎಂಬ ಕಾರಣಕ್ಕಾಗಿಯಷ್ಟೇ ಹೀಗೆ ಬರೆಯುತ್ತಿರುವೆ, ಎಂದು ತಪ್ಪು ತಿಳಿಯಬೇಡಿ. ನಾವು ಹಲವಾರು ಬಾರಿ, ಪೊಲೀಸರು routine check ಗೆ, over speed ಗೆ, traffic violationsಗಳಿಗೆ ನಿಲ್ಲಿಸಿ ಪರಿಶೀಲಿಸಿದ್ದು, ಒಮ್ಮೊಮ್ಮೆ ದಂಡ ಕಟ್ಟಿದ್ದ ಅನುಭವಗಳೂ ಇವೆ. ಹಾಗಾಗಿಯೇ ಇಲ್ಲಿ ಈ ಪೊಲೀಸರು ವ್ಯವಹರಿಸಿದ್ದನ್ನು ನಾನು ಪ್ರಾಮಾಣಿಕವಾಗಿ ತಿಳಿಸುತ್ತಿದ್ದೇನೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಅಲ್ಲಿದ್ದ ನಾವು ಐವರ ಅಭಿಪ್ರಾಯ.
ಕೈಯಲ್ಲೊಂದು handy cam ಹಿಡಿದಿದ್ದ ಆತ, ನಮ್ಮ ಹತ್ತಿರಕ್ಕೆ ಬಂದವನೇ ನಮ್ಮೆಲ್ಲರನ್ನೂ ಒಟ್ಟಿಗೆ ಪಕ್ಕಕ್ಕೆ ನಿಲ್ಲುವಂತೆ ಹೇಳಿ, ನಮ್ಮ ವೀಡಿಯೊ ತೆಗೆಯತೊಡಗಿದ. ಆ ಕ್ಷಣಕ್ಕೆ ನಾವೆಲ್ಲರೂ ಸಿಟ್ಟಿಗೆದ್ದೆವು. ಯಾವ ಅಧಿಕಾರದ ಮೇಲೆ, ಆತ ನಮ್ಮ ಬಗ್ಗೆ ಏನೂ ವಿಚಾರಿಸದೆ ವಿಡಿಯೋ ಮಾಡುತ್ತಿದ್ದಾನೆ ಎಂದು. ನಮ್ಮ ಮಾತೇನನ್ನೂ ಗಣನೆಗೆ ತೆಗೆದುಕೊಳ್ಳದವನಂತೆ, ವಿಡಿಯೋ ತೆಗೆಯುತ್ತಲೇ ತಮಿಳಿನಲ್ಲಿ ವಿಚಾರಿಸತೊಡಗಿದ. ಯಾರು ನೀವು? ಎಲ್ಲಿಂದ ಬರುತ್ತಿದ್ದೀರಾ? racing ಮಾಡ್ತಿದೀರಾ ಇಲ್ಲಿ? ಈ ಹುಡುಗಿಯರು ಯಾರು? ಎಂದು ಕೇಳತೊಡಗಿದ.
ಇಂಥ ಸಂದರ್ಭಗಳಲ್ಲಿ ಶರತ್ ಸಿಟ್ಟಾಗುತ್ತಾರೆ ಎಂದು ನನಗೆ ಗೊತ್ತಿತ್ತು, ಶಿವು ಅಷ್ಟಾಗಿ respond ಮಾಡುವುದಿಲ್ಲ ಅಂತಲೂ ಗೊತ್ತು. ಅಲ್ಲದೇ ದುರಹಂಕಾರದ ಪೊಲೀಸರಲ್ಲಿ, ಅವರು ಏನೇ ಅಂದರೂ, ಸಭ್ಯತೆಯಿಂದ ನಾಟಕೀಯವಾಗಿಯಾದರೂ ವಿಧೇಯವಾಗಿ ವರ್ತಿಸಿದರೆ ಪರಿಸ್ಥಿತಿ ಸಲೀಸಾಗಿ ನಿಭಾಯಿಸಬಹುದು. ಹಾಗಾಗಿ ನಾನೇ ಮುಂದಾಗಿ, ಆತ ಕೇಳಿದ ಪ್ರಶ್ನೆಗಳನ್ನು ಊಹಿಸಿ ಅರ್ಥ ಮಾಡಿಕೊಂಡು, ಎಲ್ಲವಕ್ಕೂ ಉತ್ತರಿಸತೊಡಗಿದೆ. ನಮ್ಮ ವಿಳಾಸ, ಕೆಲಸ ಕಾರ್ಯ, ಇಲ್ಲಿಗೇಕೆ ಬಂದೆವೆಂಬುದನ್ನೂ ಹೇಳಿ, ನಮ್ಮ ಲಗೇಜುಗಳನ್ನು ತೋರಿಸಿ, ಇಬ್ಬಿಬ್ಬರು ಕೂತು ಸಾಗುವ ನಾವು racing ಮಾಡುವುದು ಸಾಧ್ಯವೇ ಎಂದು ತಿಳಿಸಿದೆ. ಈ ಹುಡುಗಿಯರು ಯಾರೆಂದು ಕೇಳಿದ್ದಕ್ಕೆ, ಇವರುಗಳ ಪತ್ನಿಯರೆಂದು ಹೇಳಿದರೂ, ಕೇಳದ ಆತನಿಗೆ marriage cirtificate, ಆಧಾರ್ ಕಾರ್ಡ್ ಗಳನ್ನು ತೋರಿಸಬೇಕಾಯಿತು. ಅಷ್ಟು ಅನುಚಿತವಾಗಿ ವರ್ತಿಸಿದ್ದು ಅಲ್ಲಿದ್ದ ಇಬ್ಬರು ಸ್ತ್ರೀಯರಿಗೂ ಬಹಳಷ್ಟು ಬೇಸರ ತರಿಸಿತ್ತು. ಅಷ್ಟರಲ್ಲಿ ಆತನ ಜೊತೆಗಿದ್ದ ಪೊಲೀಸರೆಲ್ಲ ಬಂದು, ಏನು, ಏನೆಂದು ಕೇಳತೊಡಗಿದರು.
"ಹಾಗಾದರೆ ನಮ್ಮನ್ನು ನೋಡಿ ಇಲ್ಲ್ಯಾಕೆ ನಿಲ್ಲಿಸಿದರೆಂದು" ಕೇಳಿದ. ಆಗ ಎದುರಲ್ಲೇ ಇದ್ದ Royal Enfield Service Center ತೋರಿಸಿ, ಶಿವು ಬೈಕಿನ ಬಿದ್ದು ಹೋಗಿದ್ದ battery cover ಕೂಡ ತೋರಿಸಿ, ಇಲ್ಲಿ ಇದನ್ನು ಕೊಳ್ಳುವ ಸಲುವಾಗಿ ನಿಲ್ಲಿಸಿದೆವೆಂದು ಸಮಜಾಯಿಷಿ ಕೊಟ್ಟೆವು. ಆಗ ಅಲ್ಲಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಬಂದ ಒಬ್ಬ RE-mechanic ನ ನಿಲ್ಲಿಸಿ, ನಿಮ್ಮಲ್ಲಿ ಈ ಕವರ್ ಸಿಗುತ್ತದೆಯೇ ಎಂದು ಕೇಳಿದೆವು. ಆತ "ಇಲ್ಲ, ಇಲ್ಲಿ ಖಾಲಿಯಾಗಿದೆ" ಅಂದ. ಅದನ್ನ ಕೇಳಿಸಿಕೊಂಡ ಆ ಪೊಲೀಸರು ಸುಮ್ಮನೆ ವಾಪಸ್ಸಾದರು. ನಮ್ಮನ್ನು ಮತ್ತೆ ಏನೇ ಪ್ರಶ್ನಿಸಿದರೂ ಎಲ್ಲಕ್ಕೂ ನಾವು ಸಮಜಾಯಿಷಿಗೆ ತಯಾರಿದ್ದೇವೆಂದು ತಿಳಿದು, ಅಂದಿನ ಮಾಮೂಲು ಸಿಗದ ಬೇಸರಕ್ಕೋ ಏನೋ, ಒಂದು ನಿರ್ಭಾವ ನೋಟ ಬೀರಿ ಅವರು ಹೊರಟು ಹೋದರು. ಅಷ್ಟನ್ನೆಲ್ಲಾ ಅವರಲ್ಲಿ ವ್ಯವರಿಸುವಾಗ, ವಿದ್ಯಾವಂತರಾಗಿ ಸರ್ಕಾರಿ ನೌಕರಿಯಲ್ಲಿದ್ದರೂ ಸಹ, ಕನಿಷ್ಠ ವ್ಯಾವಹಾರಿಕ english ಜ್ಞಾನವಿಲ್ಲದ ಆ ಪೊಲೀಸರನ್ನ ಕಂಡು ಒಂದು irritating ಸಿಟ್ಟು ನಮ್ಮೆಲ್ಲರಲ್ಲೂ ಮೂಡಿತ್ತು.
ನಮಗೆ ಸಿಟ್ಟು, ಬೇಸರ ಎರಡೂ ಆದರೂ, ಇಷ್ಟಕ್ಕೆ ಮುಗಿಯಿತಲ್ಲ ಎಂದುಕೊಂಡು, ಮುಂದೆ ಇನ್ನೆಲ್ಲಾದರೊ ಆ ಕವರ್ ಹಾಕಿಸಿಕೊಂಡರಾಯ್ತೆಂದು, ಪ್ರಯಾಣ ಮುಂದುವರಿಸಿದೆವು. ಇನ್ನಷ್ಟು ದೂರ ಕ್ರಮಿಸಿ ಒಂದು ಸಣ್ಣ Coffee Break ಗೆ .
ಒಂದು ಮಾಮೂಲು ಹೆದ್ದಾರಿ ಹೋಟೆಲ್ ಅದು, ಬಿಸಿ ಇಡ್ಲಿ ಹಾಗೂ ದೋಸೆ ಆಗ ತಾನೇ ತಯಾರಾಗುತ್ತಿತ್ತು. ದೋಸೆ (ಉತ್ತಪ್ಪಮ್) ಅಷ್ಟು ಹಿಡಿಸಲಿಲ್ಲವಾದರೂ, ಇಡ್ಲಿ ಬಹಳ ರುಚಿಯಾಗಿತ್ತು. ತಿಂದು ಬಿಸಿ ಕಾಫೀ ಕುಡಿಯುತ್ತಾ ಕುಳಿತಿದ್ದಾಗ, ಹೋಟೆಲಿನ ಪಕ್ಕದ ಹೊಲದ ಮೈದಾನದಲ್ಲಿ ನೆಡೆಯುತ್ತಿದ್ದ ಜಲ್ಲಿಕಟ್ಟು ಕಾಣಿಸಿತು. ನೋಡಲು ಹೋಗೋಣವೇ ಅಂದುಕೊಂಡರೂ, ಅಷ್ಟೊತ್ತಿಗಾಗಲೇ ಕತ್ತಲಾಗತೊಡಗಿದ್ದಲ್ಲದೇ, ಅಲ್ಲಿ ಜನ ಕುಡಿದು ಕುಣಿದು ಮತ್ತೇರಿದಂತೆ ಇರುತ್ತಾರಾದ್ದರಿಂದ ಅತ್ತ ಹೋಗದೆ, ಸುಮ್ಮನೆ ಮಧುರೈ ದಾರಿ ಹಿಡಿದೆವು.
ಮತ್ತೆಲ್ಲೂ ನಿಲ್ಲದೇ ಮಧುರೈ ತಲುಪಲು ನಿರ್ಧರಿಸಿ ಹೊರಡುವಾಗ, ನಾನು ಕಿವಿಗೆ earphones ಹಾಕಿಕೊಂಡು, ಮ್ಯೂಸಿಕ್ ಕೇಳುತ್ತಾ ಅವರ ಬೈಕುಗಳನ್ನು ಹಿಂಬಾಲಿಸಿದೆ.
ಎಲ್ಲಿ ನಮ್ಮ ಬೈಕುಗಳು ದೂರ-ದೂರಾದವೊ ತಿಳಿಯಲಿಲ್ಲ, ನಾನು ಅವರಿಬ್ಬರಿಗಿಂತ ವೇಗವಾಗಿ ಮುಂದೆ ಮುಂದೆ ಬಂದಿದ್ದೆ. ಇದಕ್ಕೆ ಕಾರಣವೂ ಇದೆ.
ನನ್ನ ಮತ್ತು ಶರತ್ ರ ಬೈಕುಗಳು ಸುಮಾರು ಹತ್ತಿರ ಹತ್ತಿರವಾಗೇ ಸಾಗಿತ್ತಿದ್ದೆವು. ಮಧ್ಯ ಸಾಗಿಬಂದ ಒಂದು ಕಾರಿನಲ್ಲಿದ್ದ ಕೆಲ ಪುಂಡರು ಮೊದಲು ಸಿಕ್ಕ ನನ್ನ ಬೈಕನ್ನು, ನೋಡಿ ನೋಡಿ ಗೇಲಿ ಮಾಡುತ್ತಾ ಮುಂದೆ ಹೋದರು. ಆಗ ತಕ್ಷಣ ನನಗನ್ನಿಸಿತು ಇವರು ನನ್ನ ಮುಂದೆ ಸಾಗುತ್ತಿರುವ ಶರತ್ ರ ಬೈಕಿಗೂ ಗೇಲಿ ಮಾಡುವರೆಂದು, ಅಲ್ಲದೆ ಹಿಂದೆ ಶ್ವೇತಾ ಕುಳಿತಿದ್ದರಿಂದ ಆ ಪುಂಡರು ಇನ್ನೂ ಇರಿಸು ಮುರಿಸನ್ನುಂಟು ಮಾಡುವರೆಂದುಕೊಂಡು, ಅವರ ಬೈಕಿಗೂ ಮತ್ತು ಕಾರಿಗೂ ನಡುವಲ್ಲಿ ಸಾಗಿ ಕೊಂಚವಾದರೂ ಅದನ್ನು ತಪ್ಪಿಸೋಣವೆಂದು ವೇಗ ಹೆಚ್ಚಿಸಿಕೊಂಡು ಮುಂದೆ ಹೋದೆ.
ಆ ಪೋಲಿಗಳು ಏನೇನೋ ಅಂದರೂ, ವೇಗವಾಗಿ ಸಾಗುತ್ತಿದ್ದ ನಾವು ಅತ್ತ ಗಮನ ಹರಿಸಲೂ ಇಲ್ಲ, ಅಲ್ಲದೆ ಹೆಲ್ಮೆಟ್ ಧರಿಸಿ full cover ಆಗಿದ್ದ ನಾವು ಏನೆಂದು ಕೇಳಿಸಿಕೊಳ್ಳಲೂ ಇಲ್ಲ. ಆದರೆ ತುಸು ತೊಂದರೆಯನ್ನಂತೂ ಕೊಟ್ಟು ಮುಂದೆ ಹೋದರು ಅವರು. ಹೀಗೇ ಸಾಗುತ್ತಾ ಬಂದ ನಾನು, ಯಾವಾಗ ಬಹಳ ದೂರ ಬಂದೆ ಎಂದು ತಿಳಿಯಲೇ ಇಲ್ಲ. ಅಲ್ಲದೇ ಶರತ್-ಶ್ವೇತ ನನಗಿಂತ ಮುಂದೆ ಹೋದರೋ, ಹಿಂದೆ ಉಳಿದರೋ ಅದೂ ತಿಳಿಯಲಿಲ್ಲ.
ಬಹಳ ದೂರ ಹೋದ ಮೇಲೆ ಅನುಮಾನ ಬಂದು, ಬೈಕು ನಿಲ್ಲಿಸಿ ಮ್ಯಾಪ್ ಹಾಕಿ ನೋಡಿದಾಗ, ಮಧುರೈ ನನ್ನ ಹಿಂದಕ್ಕೆ ಉಳಿಯಿತು ಎಂದು ತಿಳಿಯಿತು. ಆಗ, ಶಿವು ಮಾತ್ರ ಖಂಡಿತಾ ನನ್ನ ಹಿಂದೆಯೇ ಬರುತ್ತಿದ್ದಾನೆ ಎಂದು ಅನ್ನಿಸಿ, ದೀಪಿಕಾಗೆ ಫೋನ್ ಮಾಡಿದೆ. ಆಗ ದೀಪಿಕಾ ಹೇಳಿದರು, "ನೀವ್ಯಾಕೆ ಮುಂದೆ ಹೋದಿರಿ, ನಾವು ಮತ್ತು ಶರತ್-ಶ್ವೇತ ಇಲ್ಲಿಯೇ ಮಧುರೈಗೆ ಹೆದ್ದಾರಿಯಿಂದ turn ಆಗುವ ಕಡೆ ಇದ್ದೀವಿ. ನಿಮ್ಮ ಫೋನ್ ಕೂಡ not reachable ಬರುತ್ತಿದೆ".
ಆಗ ನಾನು, "ನನಗೆ ತಿಳಿಯಲೇ ಇಲ್ಲ ಆ entry. ಸರಿ ನೀವು ಅಲ್ಲಿಂದ ಹೋಟೆಲ್ಲಿಗೆ ಬನ್ನಿ. ನನಗೆ ನೀವು ಬುಕ್ ಮಾಡಿರುವ ಹೋಟೆಲ್ ಹೆಸರು ನೆನಪಿದೆ, ನಾನು map ಹಾಕಿಕೊಂಡು ಬರ್ತೀನಿ" ಅಂದೆ.
ಅಲ್ಲಿಂದ ಮೊಬೈಲಿನಲ್ಲಿ map ಹಿಡಿದು ವಾಪಸ್ ಹೊರಟು, ಮಧುರೈನ ಸಿಟಿ ಮಧ್ಯದಲ್ಲಿದ್ದ
ಹೋಟೆಲ್ ತಲುಪಿದೆ. ಆದರೆ ಅವರು ಯಾರೂ ಅಲ್ಲಿಗಿನ್ನು ಬಂದಿರಲಿಲ್ಲ. ಮತ್ತೆ ಫೋನ್ ಮಾಡಿ ನಾನು ಅದೇ ಹೋಟೆಲಿಗೆ ಬಂದಿರುವೆನೋ ಏನೋ, ಎಂದು ಕೇಳಿದೆ. ನಾನು ಸರಿಯಾದ ವಿಲಾಸಕ್ಕೇ ತಲುಪಿರುವೆನೆಂದೂ, ಅವರು ಏಲ್ಲೋ ಒಂದು ಕಡೆ ದಾರಿ ತಪ್ಪಿ ತಡವಾಗಿದ್ದರಿಂದ, ಈಗ ಅಲ್ಲಿಗೆ ಬರುತ್ತಿರುವರೆಂದು ಹೇಳಿದರು.
ಸಮಯ ಸುಮಾರು 9.30 ಆಗಿತ್ತು. ಕನ್ಯಾಕುಮಾರಿಯಿಂದ 250 km ಕ್ರಮಿಸಿ ಬರಲು, ಒಟ್ಟು ಐದು ತಾಸುಗಳಾಗಿದ್ದವು ನಮಗೆ.
ತುಸು ಕಾದ ಬಳಿಕ ಅವರೂ ತಲುಪಿದರು. ನಮ್ಮ ಲಗೇಜನ್ನೆಲ್ಲ ಇಳಿಸಿ, ರೂಮುಗಳಿಗೆ ಹೊತ್ತೊಯ್ದು, ನಾವು ಫ್ರೆಶ್ ಆಗಿ ಊಟ ಹುಡುಕಿಕೊಂಡು ಹೊರಟೆವು. ಮಧುರೈ ದೇವಸ್ಥಾನದ ಬೀದಿಯಲ್ಲಿ ಇರುವ ಒಂದು ಹೋಟೆಲ್ ತೆರೆದಿತ್ತು. ಆದರೆ ಅಲ್ಲೆಲ್ಲೂ ರಾತ್ರಿಗೆ ಊಟ ಸಿಗುವುದಿಲ್ಲ, ಬರೀ roast (ದೋಸೆ) ಅಥವಾ ಇಡ್ಲಿ ಸಿಗುವುದೆಂದು ಹೇಳಿದರು. ದೋಸೆ ಜೊತೆಗೆ ಮತ್ತೆ ಕಾಫಿ ಕುಡಿದು, ವಾಪಸ್ಸಾದೆವು. ನಾಳೆ ಬೆಳಿಗ್ಗೆ 6ಕ್ಕೇ ದೇವಸ್ಥಾನ ನೋಡಲು ಹೊರಡಬೇಕೆಂದು ತೀರ್ಮಾನಿಸಿ, ನಮ್ಮ ನಮ್ಮ ರೂಮು ಸೇರಿದೆವು.
ಮೊದಲ ದಿನವಾದ್ದರಿಂದಲೋ ಏನೋ, ಅಷ್ಟೇನೂ ಸುಸ್ತಾಗಿರಲಿಲ್ಲ. ಆದರೂ ಹಿಂದಿನ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡಿ, ಈ ದಿನ ಪೂರ್ತಿ ಚಟುವಟಿಕೆಯಿಂದ ಇದ್ದದ್ದರಿಂದ ಕಣ್ಮುಚ್ಚಿದೊಡನೆ ತಣ್ಣಗೆ ನಿದ್ದೆ ಬಂತು.
Day-1 Ride
- Kanyakumari to Madhurai
- Disatance covered - 250 KM
- Route Map
ಅಷ್ಟರಲ್ಲಿ ಶಿವು-ದೀಪಿಕಾ ಕೂಡ ಬೈಕಿನಲ್ಲಿ ಬಂದರು, ನಾವವರನ್ನ ತಡೆದು ನಿಲ್ಲುವಂತೆ ಹೇಳಿದೆವು. ನಾವಿಲ್ಲಿ ಯಾಕೆ ನಿಂತಿರುವೆವೆಂದು ಅವರಿಗೆ ಗೊತ್ತೇ ಇಲ್ಲ, ಬಂದು ಬೈಕನ್ನು ನಮ್ಮ ಪಕ್ಕ ನಿಲ್ಲಿಸಿದರು.
ಅಷ್ಟರಲ್ಲಿ ಆ ಪೊಲೀಸರಲ್ಲಿ ಮುಂದಿದ್ದವನು ನಮ್ಮ ಹತ್ತಿರ ಬಂದಾಗಿತ್ತು. ಅವನ ಮುಖಚರ್ಯೆಯಾಗಲಿ, ಬಂದು ವ್ಯವಹರಿಸತೊಡಗಿದ ರೀತಿಯಾಗಲಿ, ಒಂದೂ ನಯಾ ಪೈಸಾ ಮರ್ಯಾದೆ ಕೊಡುವಂತಿರಲಿಲ್ಲ. ಅವನ ಕಣ್ಣಿನ ತುಂಬಾ ಇವತ್ತಿನ ಮಟ್ಟಿಗೆ ಲಂಚ ಸಿಕ್ಕೀತೆಂಬ ದುರಾಸೆಯೊಂದೇ ಕಾಣುತಿತ್ತು
ನಮ್ಮಲ್ಲಿ ಪೊಲೀಸರಿಗೆ, ತುಂಡು ರಾಜಕಾರಣಿಗಳಿಗೆ ಮತ್ತು ಕೆಲವು ಇಲಾಖೆಯ ಸರ್ಕಾರಿ ನೌಕರರಿಗೆ ಇರುವಷ್ಟು ದರ್ಪ, ದುರಹಂಕಾರ, ಬೇರೆ ಇನ್ನ್ಯಾರಿಗೂ ಇರುವುದಿಲ್ಲ. ಇಲ್ಲಿ ಈ ಪೊಲೀಸರು ನಮ್ಮೊಡನೆ ಗೌರವದಿಂದ ವ್ಯವಹರಿಸಲಿಲ್ಲ ಎಂಬ ಕಾರಣಕ್ಕಾಗಿಯಷ್ಟೇ ಹೀಗೆ ಬರೆಯುತ್ತಿರುವೆ, ಎಂದು ತಪ್ಪು ತಿಳಿಯಬೇಡಿ. ನಾವು ಹಲವಾರು ಬಾರಿ, ಪೊಲೀಸರು routine check ಗೆ, over speed ಗೆ, traffic violationsಗಳಿಗೆ ನಿಲ್ಲಿಸಿ ಪರಿಶೀಲಿಸಿದ್ದು, ಒಮ್ಮೊಮ್ಮೆ ದಂಡ ಕಟ್ಟಿದ್ದ ಅನುಭವಗಳೂ ಇವೆ. ಹಾಗಾಗಿಯೇ ಇಲ್ಲಿ ಈ ಪೊಲೀಸರು ವ್ಯವಹರಿಸಿದ್ದನ್ನು ನಾನು ಪ್ರಾಮಾಣಿಕವಾಗಿ ತಿಳಿಸುತ್ತಿದ್ದೇನೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಅಲ್ಲಿದ್ದ ನಾವು ಐವರ ಅಭಿಪ್ರಾಯ.
ಕೈಯಲ್ಲೊಂದು handy cam ಹಿಡಿದಿದ್ದ ಆತ, ನಮ್ಮ ಹತ್ತಿರಕ್ಕೆ ಬಂದವನೇ ನಮ್ಮೆಲ್ಲರನ್ನೂ ಒಟ್ಟಿಗೆ ಪಕ್ಕಕ್ಕೆ ನಿಲ್ಲುವಂತೆ ಹೇಳಿ, ನಮ್ಮ ವೀಡಿಯೊ ತೆಗೆಯತೊಡಗಿದ. ಆ ಕ್ಷಣಕ್ಕೆ ನಾವೆಲ್ಲರೂ ಸಿಟ್ಟಿಗೆದ್ದೆವು. ಯಾವ ಅಧಿಕಾರದ ಮೇಲೆ, ಆತ ನಮ್ಮ ಬಗ್ಗೆ ಏನೂ ವಿಚಾರಿಸದೆ ವಿಡಿಯೋ ಮಾಡುತ್ತಿದ್ದಾನೆ ಎಂದು. ನಮ್ಮ ಮಾತೇನನ್ನೂ ಗಣನೆಗೆ ತೆಗೆದುಕೊಳ್ಳದವನಂತೆ, ವಿಡಿಯೋ ತೆಗೆಯುತ್ತಲೇ ತಮಿಳಿನಲ್ಲಿ ವಿಚಾರಿಸತೊಡಗಿದ. ಯಾರು ನೀವು? ಎಲ್ಲಿಂದ ಬರುತ್ತಿದ್ದೀರಾ? racing ಮಾಡ್ತಿದೀರಾ ಇಲ್ಲಿ? ಈ ಹುಡುಗಿಯರು ಯಾರು? ಎಂದು ಕೇಳತೊಡಗಿದ.
ಇಂಥ ಸಂದರ್ಭಗಳಲ್ಲಿ ಶರತ್ ಸಿಟ್ಟಾಗುತ್ತಾರೆ ಎಂದು ನನಗೆ ಗೊತ್ತಿತ್ತು, ಶಿವು ಅಷ್ಟಾಗಿ respond ಮಾಡುವುದಿಲ್ಲ ಅಂತಲೂ ಗೊತ್ತು. ಅಲ್ಲದೇ ದುರಹಂಕಾರದ ಪೊಲೀಸರಲ್ಲಿ, ಅವರು ಏನೇ ಅಂದರೂ, ಸಭ್ಯತೆಯಿಂದ ನಾಟಕೀಯವಾಗಿಯಾದರೂ ವಿಧೇಯವಾಗಿ ವರ್ತಿಸಿದರೆ ಪರಿಸ್ಥಿತಿ ಸಲೀಸಾಗಿ ನಿಭಾಯಿಸಬಹುದು. ಹಾಗಾಗಿ ನಾನೇ ಮುಂದಾಗಿ, ಆತ ಕೇಳಿದ ಪ್ರಶ್ನೆಗಳನ್ನು ಊಹಿಸಿ ಅರ್ಥ ಮಾಡಿಕೊಂಡು, ಎಲ್ಲವಕ್ಕೂ ಉತ್ತರಿಸತೊಡಗಿದೆ. ನಮ್ಮ ವಿಳಾಸ, ಕೆಲಸ ಕಾರ್ಯ, ಇಲ್ಲಿಗೇಕೆ ಬಂದೆವೆಂಬುದನ್ನೂ ಹೇಳಿ, ನಮ್ಮ ಲಗೇಜುಗಳನ್ನು ತೋರಿಸಿ, ಇಬ್ಬಿಬ್ಬರು ಕೂತು ಸಾಗುವ ನಾವು racing ಮಾಡುವುದು ಸಾಧ್ಯವೇ ಎಂದು ತಿಳಿಸಿದೆ. ಈ ಹುಡುಗಿಯರು ಯಾರೆಂದು ಕೇಳಿದ್ದಕ್ಕೆ, ಇವರುಗಳ ಪತ್ನಿಯರೆಂದು ಹೇಳಿದರೂ, ಕೇಳದ ಆತನಿಗೆ marriage cirtificate, ಆಧಾರ್ ಕಾರ್ಡ್ ಗಳನ್ನು ತೋರಿಸಬೇಕಾಯಿತು. ಅಷ್ಟು ಅನುಚಿತವಾಗಿ ವರ್ತಿಸಿದ್ದು ಅಲ್ಲಿದ್ದ ಇಬ್ಬರು ಸ್ತ್ರೀಯರಿಗೂ ಬಹಳಷ್ಟು ಬೇಸರ ತರಿಸಿತ್ತು. ಅಷ್ಟರಲ್ಲಿ ಆತನ ಜೊತೆಗಿದ್ದ ಪೊಲೀಸರೆಲ್ಲ ಬಂದು, ಏನು, ಏನೆಂದು ಕೇಳತೊಡಗಿದರು.
"ಹಾಗಾದರೆ ನಮ್ಮನ್ನು ನೋಡಿ ಇಲ್ಲ್ಯಾಕೆ ನಿಲ್ಲಿಸಿದರೆಂದು" ಕೇಳಿದ. ಆಗ ಎದುರಲ್ಲೇ ಇದ್ದ Royal Enfield Service Center ತೋರಿಸಿ, ಶಿವು ಬೈಕಿನ ಬಿದ್ದು ಹೋಗಿದ್ದ battery cover ಕೂಡ ತೋರಿಸಿ, ಇಲ್ಲಿ ಇದನ್ನು ಕೊಳ್ಳುವ ಸಲುವಾಗಿ ನಿಲ್ಲಿಸಿದೆವೆಂದು ಸಮಜಾಯಿಷಿ ಕೊಟ್ಟೆವು. ಆಗ ಅಲ್ಲಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಬಂದ ಒಬ್ಬ RE-mechanic ನ ನಿಲ್ಲಿಸಿ, ನಿಮ್ಮಲ್ಲಿ ಈ ಕವರ್ ಸಿಗುತ್ತದೆಯೇ ಎಂದು ಕೇಳಿದೆವು. ಆತ "ಇಲ್ಲ, ಇಲ್ಲಿ ಖಾಲಿಯಾಗಿದೆ" ಅಂದ. ಅದನ್ನ ಕೇಳಿಸಿಕೊಂಡ ಆ ಪೊಲೀಸರು ಸುಮ್ಮನೆ ವಾಪಸ್ಸಾದರು. ನಮ್ಮನ್ನು ಮತ್ತೆ ಏನೇ ಪ್ರಶ್ನಿಸಿದರೂ ಎಲ್ಲಕ್ಕೂ ನಾವು ಸಮಜಾಯಿಷಿಗೆ ತಯಾರಿದ್ದೇವೆಂದು ತಿಳಿದು, ಅಂದಿನ ಮಾಮೂಲು ಸಿಗದ ಬೇಸರಕ್ಕೋ ಏನೋ, ಒಂದು ನಿರ್ಭಾವ ನೋಟ ಬೀರಿ ಅವರು ಹೊರಟು ಹೋದರು. ಅಷ್ಟನ್ನೆಲ್ಲಾ ಅವರಲ್ಲಿ ವ್ಯವರಿಸುವಾಗ, ವಿದ್ಯಾವಂತರಾಗಿ ಸರ್ಕಾರಿ ನೌಕರಿಯಲ್ಲಿದ್ದರೂ ಸಹ, ಕನಿಷ್ಠ ವ್ಯಾವಹಾರಿಕ english ಜ್ಞಾನವಿಲ್ಲದ ಆ ಪೊಲೀಸರನ್ನ ಕಂಡು ಒಂದು irritating ಸಿಟ್ಟು ನಮ್ಮೆಲ್ಲರಲ್ಲೂ ಮೂಡಿತ್ತು.
ನಮಗೆ ಸಿಟ್ಟು, ಬೇಸರ ಎರಡೂ ಆದರೂ, ಇಷ್ಟಕ್ಕೆ ಮುಗಿಯಿತಲ್ಲ ಎಂದುಕೊಂಡು, ಮುಂದೆ ಇನ್ನೆಲ್ಲಾದರೊ ಆ ಕವರ್ ಹಾಕಿಸಿಕೊಂಡರಾಯ್ತೆಂದು, ಪ್ರಯಾಣ ಮುಂದುವರಿಸಿದೆವು. ಇನ್ನಷ್ಟು ದೂರ ಕ್ರಮಿಸಿ ಒಂದು ಸಣ್ಣ Coffee Break ಗೆ .
ಒಂದು ಮಾಮೂಲು ಹೆದ್ದಾರಿ ಹೋಟೆಲ್ ಅದು, ಬಿಸಿ ಇಡ್ಲಿ ಹಾಗೂ ದೋಸೆ ಆಗ ತಾನೇ ತಯಾರಾಗುತ್ತಿತ್ತು. ದೋಸೆ (ಉತ್ತಪ್ಪಮ್) ಅಷ್ಟು ಹಿಡಿಸಲಿಲ್ಲವಾದರೂ, ಇಡ್ಲಿ ಬಹಳ ರುಚಿಯಾಗಿತ್ತು. ತಿಂದು ಬಿಸಿ ಕಾಫೀ ಕುಡಿಯುತ್ತಾ ಕುಳಿತಿದ್ದಾಗ, ಹೋಟೆಲಿನ ಪಕ್ಕದ ಹೊಲದ ಮೈದಾನದಲ್ಲಿ ನೆಡೆಯುತ್ತಿದ್ದ ಜಲ್ಲಿಕಟ್ಟು ಕಾಣಿಸಿತು. ನೋಡಲು ಹೋಗೋಣವೇ ಅಂದುಕೊಂಡರೂ, ಅಷ್ಟೊತ್ತಿಗಾಗಲೇ ಕತ್ತಲಾಗತೊಡಗಿದ್ದಲ್ಲದೇ, ಅಲ್ಲಿ ಜನ ಕುಡಿದು ಕುಣಿದು ಮತ್ತೇರಿದಂತೆ ಇರುತ್ತಾರಾದ್ದರಿಂದ ಅತ್ತ ಹೋಗದೆ, ಸುಮ್ಮನೆ ಮಧುರೈ ದಾರಿ ಹಿಡಿದೆವು.
ಮತ್ತೆಲ್ಲೂ ನಿಲ್ಲದೇ ಮಧುರೈ ತಲುಪಲು ನಿರ್ಧರಿಸಿ ಹೊರಡುವಾಗ, ನಾನು ಕಿವಿಗೆ earphones ಹಾಕಿಕೊಂಡು, ಮ್ಯೂಸಿಕ್ ಕೇಳುತ್ತಾ ಅವರ ಬೈಕುಗಳನ್ನು ಹಿಂಬಾಲಿಸಿದೆ.
ಎಲ್ಲಿ ನಮ್ಮ ಬೈಕುಗಳು ದೂರ-ದೂರಾದವೊ ತಿಳಿಯಲಿಲ್ಲ, ನಾನು ಅವರಿಬ್ಬರಿಗಿಂತ ವೇಗವಾಗಿ ಮುಂದೆ ಮುಂದೆ ಬಂದಿದ್ದೆ. ಇದಕ್ಕೆ ಕಾರಣವೂ ಇದೆ.
ನನ್ನ ಮತ್ತು ಶರತ್ ರ ಬೈಕುಗಳು ಸುಮಾರು ಹತ್ತಿರ ಹತ್ತಿರವಾಗೇ ಸಾಗಿತ್ತಿದ್ದೆವು. ಮಧ್ಯ ಸಾಗಿಬಂದ ಒಂದು ಕಾರಿನಲ್ಲಿದ್ದ ಕೆಲ ಪುಂಡರು ಮೊದಲು ಸಿಕ್ಕ ನನ್ನ ಬೈಕನ್ನು, ನೋಡಿ ನೋಡಿ ಗೇಲಿ ಮಾಡುತ್ತಾ ಮುಂದೆ ಹೋದರು. ಆಗ ತಕ್ಷಣ ನನಗನ್ನಿಸಿತು ಇವರು ನನ್ನ ಮುಂದೆ ಸಾಗುತ್ತಿರುವ ಶರತ್ ರ ಬೈಕಿಗೂ ಗೇಲಿ ಮಾಡುವರೆಂದು, ಅಲ್ಲದೆ ಹಿಂದೆ ಶ್ವೇತಾ ಕುಳಿತಿದ್ದರಿಂದ ಆ ಪುಂಡರು ಇನ್ನೂ ಇರಿಸು ಮುರಿಸನ್ನುಂಟು ಮಾಡುವರೆಂದುಕೊಂಡು, ಅವರ ಬೈಕಿಗೂ ಮತ್ತು ಕಾರಿಗೂ ನಡುವಲ್ಲಿ ಸಾಗಿ ಕೊಂಚವಾದರೂ ಅದನ್ನು ತಪ್ಪಿಸೋಣವೆಂದು ವೇಗ ಹೆಚ್ಚಿಸಿಕೊಂಡು ಮುಂದೆ ಹೋದೆ.
ಆ ಪೋಲಿಗಳು ಏನೇನೋ ಅಂದರೂ, ವೇಗವಾಗಿ ಸಾಗುತ್ತಿದ್ದ ನಾವು ಅತ್ತ ಗಮನ ಹರಿಸಲೂ ಇಲ್ಲ, ಅಲ್ಲದೆ ಹೆಲ್ಮೆಟ್ ಧರಿಸಿ full cover ಆಗಿದ್ದ ನಾವು ಏನೆಂದು ಕೇಳಿಸಿಕೊಳ್ಳಲೂ ಇಲ್ಲ. ಆದರೆ ತುಸು ತೊಂದರೆಯನ್ನಂತೂ ಕೊಟ್ಟು ಮುಂದೆ ಹೋದರು ಅವರು. ಹೀಗೇ ಸಾಗುತ್ತಾ ಬಂದ ನಾನು, ಯಾವಾಗ ಬಹಳ ದೂರ ಬಂದೆ ಎಂದು ತಿಳಿಯಲೇ ಇಲ್ಲ. ಅಲ್ಲದೇ ಶರತ್-ಶ್ವೇತ ನನಗಿಂತ ಮುಂದೆ ಹೋದರೋ, ಹಿಂದೆ ಉಳಿದರೋ ಅದೂ ತಿಳಿಯಲಿಲ್ಲ.
ಬಹಳ ದೂರ ಹೋದ ಮೇಲೆ ಅನುಮಾನ ಬಂದು, ಬೈಕು ನಿಲ್ಲಿಸಿ ಮ್ಯಾಪ್ ಹಾಕಿ ನೋಡಿದಾಗ, ಮಧುರೈ ನನ್ನ ಹಿಂದಕ್ಕೆ ಉಳಿಯಿತು ಎಂದು ತಿಳಿಯಿತು. ಆಗ, ಶಿವು ಮಾತ್ರ ಖಂಡಿತಾ ನನ್ನ ಹಿಂದೆಯೇ ಬರುತ್ತಿದ್ದಾನೆ ಎಂದು ಅನ್ನಿಸಿ, ದೀಪಿಕಾಗೆ ಫೋನ್ ಮಾಡಿದೆ. ಆಗ ದೀಪಿಕಾ ಹೇಳಿದರು, "ನೀವ್ಯಾಕೆ ಮುಂದೆ ಹೋದಿರಿ, ನಾವು ಮತ್ತು ಶರತ್-ಶ್ವೇತ ಇಲ್ಲಿಯೇ ಮಧುರೈಗೆ ಹೆದ್ದಾರಿಯಿಂದ turn ಆಗುವ ಕಡೆ ಇದ್ದೀವಿ. ನಿಮ್ಮ ಫೋನ್ ಕೂಡ not reachable ಬರುತ್ತಿದೆ".
ಆಗ ನಾನು, "ನನಗೆ ತಿಳಿಯಲೇ ಇಲ್ಲ ಆ entry. ಸರಿ ನೀವು ಅಲ್ಲಿಂದ ಹೋಟೆಲ್ಲಿಗೆ ಬನ್ನಿ. ನನಗೆ ನೀವು ಬುಕ್ ಮಾಡಿರುವ ಹೋಟೆಲ್ ಹೆಸರು ನೆನಪಿದೆ, ನಾನು map ಹಾಕಿಕೊಂಡು ಬರ್ತೀನಿ" ಅಂದೆ.
ಅಲ್ಲಿಂದ ಮೊಬೈಲಿನಲ್ಲಿ map ಹಿಡಿದು ವಾಪಸ್ ಹೊರಟು, ಮಧುರೈನ ಸಿಟಿ ಮಧ್ಯದಲ್ಲಿದ್ದ
ಹೋಟೆಲ್ ತಲುಪಿದೆ. ಆದರೆ ಅವರು ಯಾರೂ ಅಲ್ಲಿಗಿನ್ನು ಬಂದಿರಲಿಲ್ಲ. ಮತ್ತೆ ಫೋನ್ ಮಾಡಿ ನಾನು ಅದೇ ಹೋಟೆಲಿಗೆ ಬಂದಿರುವೆನೋ ಏನೋ, ಎಂದು ಕೇಳಿದೆ. ನಾನು ಸರಿಯಾದ ವಿಲಾಸಕ್ಕೇ ತಲುಪಿರುವೆನೆಂದೂ, ಅವರು ಏಲ್ಲೋ ಒಂದು ಕಡೆ ದಾರಿ ತಪ್ಪಿ ತಡವಾಗಿದ್ದರಿಂದ, ಈಗ ಅಲ್ಲಿಗೆ ಬರುತ್ತಿರುವರೆಂದು ಹೇಳಿದರು.
ಸಮಯ ಸುಮಾರು 9.30 ಆಗಿತ್ತು. ಕನ್ಯಾಕುಮಾರಿಯಿಂದ 250 km ಕ್ರಮಿಸಿ ಬರಲು, ಒಟ್ಟು ಐದು ತಾಸುಗಳಾಗಿದ್ದವು ನಮಗೆ.
ತುಸು ಕಾದ ಬಳಿಕ ಅವರೂ ತಲುಪಿದರು. ನಮ್ಮ ಲಗೇಜನ್ನೆಲ್ಲ ಇಳಿಸಿ, ರೂಮುಗಳಿಗೆ ಹೊತ್ತೊಯ್ದು, ನಾವು ಫ್ರೆಶ್ ಆಗಿ ಊಟ ಹುಡುಕಿಕೊಂಡು ಹೊರಟೆವು. ಮಧುರೈ ದೇವಸ್ಥಾನದ ಬೀದಿಯಲ್ಲಿ ಇರುವ ಒಂದು ಹೋಟೆಲ್ ತೆರೆದಿತ್ತು. ಆದರೆ ಅಲ್ಲೆಲ್ಲೂ ರಾತ್ರಿಗೆ ಊಟ ಸಿಗುವುದಿಲ್ಲ, ಬರೀ roast (ದೋಸೆ) ಅಥವಾ ಇಡ್ಲಿ ಸಿಗುವುದೆಂದು ಹೇಳಿದರು. ದೋಸೆ ಜೊತೆಗೆ ಮತ್ತೆ ಕಾಫಿ ಕುಡಿದು, ವಾಪಸ್ಸಾದೆವು. ನಾಳೆ ಬೆಳಿಗ್ಗೆ 6ಕ್ಕೇ ದೇವಸ್ಥಾನ ನೋಡಲು ಹೊರಡಬೇಕೆಂದು ತೀರ್ಮಾನಿಸಿ, ನಮ್ಮ ನಮ್ಮ ರೂಮು ಸೇರಿದೆವು.
ಮೊದಲ ದಿನವಾದ್ದರಿಂದಲೋ ಏನೋ, ಅಷ್ಟೇನೂ ಸುಸ್ತಾಗಿರಲಿಲ್ಲ. ಆದರೂ ಹಿಂದಿನ ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡಿ, ಈ ದಿನ ಪೂರ್ತಿ ಚಟುವಟಿಕೆಯಿಂದ ಇದ್ದದ್ದರಿಂದ ಕಣ್ಮುಚ್ಚಿದೊಡನೆ ತಣ್ಣಗೆ ನಿದ್ದೆ ಬಂತು.
Day-1 Ride
- Kanyakumari to Madhurai
- Disatance covered - 250 KM
- Route Map
* * * * *
ದಿನ-2: ಮಧುರೈಯಿಂದ ತುಮಕೂರು http://kcsampath.blogspot.in/2017/04/2.html





Varnane Bahala Chenaagidhe :)
ReplyDelete